Select Your Language

Notifications

webdunia
webdunia
webdunia
webdunia

ಶೋಷಿತ, ಕೆಳವರ್ಗಗಳನ್ನು ಕಡೆಗಣಿಸಿದ ಬಜೆಟ್: ನಾರಾಯಣ ಸ್ವಾಮಿ

ಶೋಷಿತ, ಕೆಳವರ್ಗಗಳನ್ನು ಕಡೆಗಣಿಸಿದ ಬಜೆಟ್: ನಾರಾಯಣ ಸ್ವಾಮಿ
ಪುದುಚೇರಿ , ಸೋಮವಾರ, 2 ಮಾರ್ಚ್ 2015 (15:38 IST)
2015-16ನೇ ಸಾಲಿನ ಕೇಂದ್ರ ಬಜೆಟ್ ಶ್ರೀಮಂತರನ್ನು ಮತ್ತು ಕಾರ್ಪೊರೇಟ್ ವಲಯವನ್ನು ಓಲೈಸುವ ಪ್ರಯತ್ನವಾಗಿದ್ದು ಶೋಷಿತ ಮತ್ತು ಕೆಳವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ವಿ. ನಾರಾಯಣ ಸ್ವಾಮಿ ಹೇಳಿದ್ದಾರೆ. 
 
ಕಾರ್ಮಿಕರು, ಮೀನುಗಾರರು, ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಯನ್ನು ಬಜೆಟ್ ಕಡೆಗಣಿಸಿದೆ ಎಂದು ಟೀಕಿಸಿದ್ದಾರೆ. ಗ್ರಾಮೀಣಾಭಿವೃದ್ಧಿಗೆ , ಆರೋಗ್ಯ ಸೇವೆಗಳಿಗೆ, ಶಿಕ್ಷಣ ಮತ್ತು ಸರ್ಕಾರಿ ನೌಕರರಿಗೆ ಮಂಜೂರಾತಿಯನ್ನು ಕಡಿತಗೊಳಿಸಿದ ಕೇಂದ್ರಸರ್ಕಾರವನ್ನು ಅವರು ಟೀಕಿಸಿದರು.

ಪುದುಚೇರಿಯನ್ನು ಕೂಡ ಕಡೆಗಣಿಸಲಾಗಿದ್ದು, ಹೂಡಿಕೆದಾರರ ಆಕರ್ಷಣೆಗೆ ಮತ್ತು ಉದ್ಯೋಗ ಸೃಷ್ಟಿ ಪ್ರೋತ್ಸಾಹಕ್ಕೆ ಏನನ್ನೂ ಮಾಡಿಲ್ಲ ಎಂದು ನಾರಾಯಣ ಸ್ವಾಮಿ ಟೀಕಿಸಿದರು.

Share this Story:

Follow Webdunia kannada