Webdunia - Bharat's app for daily news and videos

Install App

ಬ್ಯಾಂಕ್‌ಗಳಿಗೆ ಸಾಲಮರುಪಾವತಿ ಬೇಕಾಗಿಲ್ಲ, ಮಲ್ಯರನ್ನು ಜೈಲಿಗೆ ಅಟ್ಟುವ ಬಯಕೆಯಿದೆ: ವಕೀಲ

Webdunia
ಬುಧವಾರ, 27 ಏಪ್ರಿಲ್ 2016 (16:27 IST)
ಐಡಿಬಿಐ ಬ್ಯಾಂಕ್‌ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯದ ದೊರೆ ವಿಜಯ್ ಮಲ್ಯ 6,000 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್ ಒಕ್ಕೂಟ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮಲ್ಯ ಪರ ವಕೀಲರು, ಬ್ಯಾಂಕುಗಳ ಗುರಿ ಹಣ ಹಿಂಪಡೆಯುವುದಲ್ಲ ಬದಲಾಗಿ ಉದ್ಯಮಪತಿಯನ್ನು ಜೈಲಿಗೆ ದೂಡುವ ಉದ್ದೇಶವನ್ನು ಹೊಂದಿವೆ ಎಂದು ವಾದಿಸಿದ್ದಾರೆ.
ಮಲ್ಯ ನೀಡಿರುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ವಿದೇಶಿ ಸ್ವತ್ತುಗಳು ಸೇರಿದಂತೆ ಮಲ್ಯ ಮತ್ತು ಅವರ ಕುಟುಂಬ ಸದಸ್ಯರ ಒಡೆತನದಲ್ಲಿರುವ ಒಟ್ಟು ಸ್ವತ್ತುಗಳ ಮೌಲ್ಯವನ್ನು ಬಹಿರಂಗ ಪಡಿಸುವಂತೆ ಸೂಚನೆ ನೀಡಿದೆ.
 
ವಿಜಯ್ ಮಲ್ಯ ತಮ್ಮ ಪತ್ನಿ ಮತ್ತು ಪುತ್ರರ ಹೆಸರಲ್ಲಿರುವ ಆಸ್ತಿಯ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಲು ಯಾವುದೇ ಅಡೆತಡೆಯಿಲ್ಲವೆಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್‌.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
 
ಹಿರಿಯ ವಕೀಲರಾದ ಸಿ.ಎಸ್‌. ವೈದ್ಯನಾಥನ್‌ ಮತ್ತು ಪರಾಗ್‌ ತ್ರಿಪಾಠಿ, ಮಲ್ಯ ಪರ ವಾದ ಮಂಡಿಸಿ, ಮಲ್ಯ ಸಾಲ ಬಾಕಿದಾರರಾಗಿದ್ದಾರೆ. ಆದರೆ ಉದ್ದೇಶಪೂರ್ವಕ ಸಾಲ ಬಾಕಿದಾರರಲ್ಲ. ಇದೊಂದು ಉದ್ಯಮದಲ್ಲಿ ನಷ್ಟ ಹೊಂದಿರುವ ಪ್ರಕರಣ ಮಾತ್ರ ಎಂದು ವಾದಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments