Webdunia - Bharat's app for daily news and videos

Install App

ಮಾರುತಿ ಸುಜುಕಿ, ಹೊಂಡಾ ವಾಹನಗಳ ಮಾರಾಟದಲ್ಲಿ ಕುಸಿತ

Webdunia
ಶನಿವಾರ, 2 ಜುಲೈ 2016 (15:15 IST)
ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಪ್ರಮುಖ ಮಾರಾಟಗಾರರ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಜೂನ್ ತಿಂಗಳ ಒಟ್ಟು ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಆದರೆ, ಹುಂಡೈ ಸೇರಿದಂತೆ ಮಹೀಂದ್ರಾ & ಮಹೀಂದ್ರಾ ಮತ್ತು ಟಾಟಾ ಮೋಟರ್ಸ್ ಕಂಪೆನಿಗಳ ಒಟ್ಟು ಮಾರಾಟದಲ್ಲಿ ಚೇತರಿಕೆ ಕಂಡು ಬಂದಿದೆ. 
 
ಹೊಂಡಾ ಸಂಸ್ಥೆಯ ಕಾರುಗಳಾದ ಫೋರ್ಡ್ ಮತ್ತು ರೆನೌಲ್ಟ್ ಆವೃತ್ತಿಯ ಕಾರುಗಳು ಕಳೆದ ತಿಂಗಳ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. 
 
ಮಾರುತಿ ಸುಜುಕಿಯ ದೇಶಿಯ ಮಾರಾಟದಲ್ಲಿ 10.2 ಪ್ರತಿಶತ ಕುಸಿತ ಕಂಡು 92,133 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಇದೆ ಅವಧಿಯಲ್ಲಿ 1,02,626 ಕಾರುಗಳು ಮಾರಾಟವಾಗಿದ್ದವು. ಆಲ್ಟೋ ಮತ್ತು ವ್ಯಾಗನ್‌ಆರ್ ಸೇರಿದಂತೆ ಮಿನಿ ಸಿಗ್ಮೆಂಟ್ ವಿಭಾಗದ ಕಾರುಗಳ ಮಾರಾಟದಲ್ಲಿ 19.3 ಪ್ರತಿಶತ ಕುಸಿತ ಕಂಡು 27,712 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 34,336 ಕಾರುಗಳು ಮಾರಾಟವಾಗಿದ್ದವು ಎಂದು ಎಮ್‌ಎಸ್‌ಐ ತನ್ನ ವರದಿಯಲ್ಲಿ ತಿಳಿಸಿದೆ.
 
ಕಾಪ್ಯಾಕ್ಟ್ ವಿಭಾಗದ ಕಾರುಗಳಾದ ಸ್ವಿಫ್ಟ್, ಎಸ್ಟಿಲೊ, ರಿಟ್ಜ್, ಡಿಜೈರ್, ಬಲೆನೋ ಕಾರುಗಳ ಮಾರಾಟದಲ್ಲಿ 12.5 ಪ್ರತಿಶತ ಕುಸಿತ ಕಂಡು 39,971 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 45,701 ಕಾರುಗಳು ಮಾರಾಟವಾಗಿದ್ದವು. 
 
ಹುಂಡೈ ಮೋಟಾರ್ ಇಂಡಿಯಾ ಸಂಸ್ಥೆಯ ಒಟ್ಟು ಮಾರಾಟದಲ್ಲಿ 9.7 ಪ್ರತಿಶತ ಚೇತರಿಕೆ ಕಂಡು 39,806 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಇದೆ ಅವಧಿಯಲ್ಲಿ 36,300 ಕಾರುಗಳು ಮಾರಾಟವಾಗಿದ್ದವು
 
ಕಾರು ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಐ10, ಎಲೈಟ್ ಐ 20 ಮತ್ತು ಕ್ರೇಟಾ ಆವೃತ್ತಿಯ ಕಾರುಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಜೊತೆಗೆ ದೇಶದಲ್ಲಿ ಉತ್ತಮ ಮಾನ್ಸೂನ್ ಮಳೆ ಮತ್ತು 7ನೇ ವೇತನ ಆಯೋಗದ ಶಿಫಾರಸು ಅಂಗೀಕಾರವಾದ ಹಿನ್ನೆಲೆಯಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಹುಂಡೈ ಮೋಟಾರ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಜೂನ್ ತಿಂಗಳ ಒಟ್ಟು ವಾಹನ ಮಾರಾಟದಲ್ಲಿ 5 ಪ್ರತಿಶತ ಹೆಚ್ಚಳವಾಗಿ 34,991 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 33,282 ಕಾರುಗಳು ಮಾರಾಟವಾಗಿದ್ದವು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments