Webdunia - Bharat's app for daily news and videos

Install App

ಸಹಾರಾ ಸಮೂಹದ ರೂ.39,000 ಕೋಟಿ ಆಸ್ತಿ ಮುಟ್ಟುಗೋಲು

Webdunia
ಮಂಗಳವಾರ, 7 ಫೆಬ್ರವರಿ 2017 (10:18 IST)
ಸಹಾರಾ-ಸೆಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನವಲಾ, ಮಹಾರಾಷ್ಟ್ರದ ಪುಣೆಯಲ್ಲಿರುವ ಸಹಾರ ಸಮೂಹದ ರೂ. 39,000 ಕೋಟಿ ವೆಚ್ಚದ ಆಸ್ತಿ ಮುಟ್ಟುಗೋಲಿಗೆ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ. ಜತೆಗೆ ಕಂಪೆನಿ ಮುಖ್ಯಸ್ಥ ಸುಬ್ರತೋ ರಾಯ್‌ಗೆ ನೀಡಿದ್ದ ಪೆರೋಲ್ ಅವಧಿ ವಿಸ್ತರಿಸಿದೆ.
 
ಸಾರ್ವಜನಿಕ ಹರಾಜಿಗಿಡಲು ಸಾಲಕ್ಕೆ ಭದ್ರತೆಯಾಗಿ ಇಟ್ಟಿರುವ ಆಸ್ತಿಗಳನ್ನು ಹೊರತುಪಡಿಸಿದಂತೆ ಹೊಂದಿರುವ ಇತರ ಆಸ್ತಿಗಳ ಪಟ್ಟಿ ಮುಂದಿನ ವಿಚಾರಣೆಯ ವೇಳೆಗೆ  ಸಲ್ಲಿಸುವಂತೆ ನ್ಯಾ.ದೀಪಕ್ ಮಿಶ್ರಾ, ನ್ಯಾ. ರಂಜನ್ ಗೊಗೋಯಿ ಮತ್ತು ನ್ಯಾ. ಎ.ಕೆ. ಸಿಕ್ರಿ ಇದ್ದ ತ್ರಿಿಸದಸ್ಯ ಪೀಠ ಸಹಾರ ಕಂಪೆನಿಗೆ ಆದೇಶಿದೆ. ಅಲ್ಲದೇ ಮುಟ್ಟುಗೋಲಿಗೆ ಆದೇಶಿಸಿರುವ ಕಂಪೆನಿಯ ಆಸ್ತಿ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿರಲಿದ್ದು, ಫೆ.27ರಂದು ನಡೆಯಲಿರುವ ಮುಂದಿನ ವಿಚಾರಣೆವರೆಗೆ ಈ ಆಸ್ತಿಯನ್ನು ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ. 
 
ಭಾರತೀಯ ಭದ್ರತಾ ಮತ್ತು ವಿನಿಮಯ ಆಯೋಗದ(ಸೆಬಿ ರೂ.14,000 ಕೋಟಿ ಸಾಲ ಮರುಪಾವತಿಸಬೇಕಾಗಿದೆ. ಈಗಾಗಲೇ ರೂ.11,000 ಕೋಟಿ ಪಾವತಿಸಲಾಗಿದೆ ಎಂದು ವಿಚಾರಣೆ ವೇಳೆ ಸಹಾರ ಕೋರ್ಟ್‌ನಲ್ಲಿ ಒಪ್ಪಿಕೊಂಡಿತ್ತು. ಕಳೆದ ವರ್ಷ ನ. 28ರಂದು ಪ್ರಕಣದ ವಿಚಾರಣೆ ನಡೆಸಿದ ಕೋರ್ಟ್, ಸುಬ್ರತೋ ರಾಯ್‌ಗೆ ಮಧ್ಯಂತರ ಜಾಮೀನು ನೀಡಿ, ಫೆ.6ರ ಒಳಗಾಗಿ ಸೆಬಿಗೆ ರೂ.600 ಕೋಟಿ ಪಾವತಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಯ್ ಸೋಮವಾರ ರೂ.600 ಕೋಟಿ ಪಾವತಿಸಿದ್ದಾರೆ. ಅಲ್ಲದೇ ಕೋರ್ಟ್ ಒಟ್ಟಾರೆ ಸಾಲ ಮರುಪಾವತಿಗೆ 2019ರವರೆಗೆ ಸಹಾರಕ್ಕೆ ಕಾಲಾವಕಾಶ ನೀಡಿದೆ.
 
ಹೂಡಿಕೆದಾರರಿಗೆ ಶೇ.15ರಷ್ಟು ಬಡ್ಡಿ ದರದಲ್ಲಿ ರೂ.20,000 ಕೋಟಿ ಮರು ಪಾವತಿ ಮಾಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸುವಲ್ಲಿ ಸುಬ್ರತೋ ರಾಯ್ ಒಡೆತನದ ಸಹಾರ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೋರೇಷನ್ ಲಿಮಿಟೆಡ್ ಮತ್ತು ಸಹಾರ ಹೌಸಿಂಗ್ ಫೈನಾನ್‌ಸ್‌ ಕಾರ್ಫೋರೇಷನ್ ಲಿಮಿಟೆಡ್ ವಿಫಲವಾಗಿದೆ ಎಂದು ಸೆಬಿ 2012ರಲ್ಲಿ ಆರೋಪಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments