Webdunia - Bharat's app for daily news and videos

Install App

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ

Krishnaveni K
ಶುಕ್ರವಾರ, 23 ಮೇ 2025 (11:26 IST)
ಬೆಂಗಳೂರು: ಸತತ ಎರಡನೇ ದಿನವೂ ಅಡಿಕೆ ಬೆಲೆ ಏರಿಕೆಯಾಗಿದ್ದು ರೈತರಿಗೆ ನಿಜಕ್ಕೂ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಇದು ಅಡಿಕೆ ಬೆಳೆಗಾರರಿಗೆ ನಿಜಕ್ಕೂ ಬಂಪರ್ ಸುದ್ದಿ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಬೆಳೆಗಾರರ ನಿರೀಕ್ಷೆಯಂತೇ ಸತತ ಎರಡನೇ ದಿನವೂ ಅಡಿಕೆ ಬೆಲೆ ಏರಿಕೆಯಾಗಿರುವುದು ಗಮನಾರ್ಹ. ಕಳೆದ ಮೂರು-ನಾಲ್ಕು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ನಿನ್ನೆ ಮತ್ತು ಇಂದು ಅಡಿಕೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ ನಿನ್ನೆ 470 ರೂ.ಗಳಿದ್ದಿದ್ದು ಇಂದು  10 ರೂ. ಏರಿಕೆಯಾಗಿ 480 ರೂ.ಗಳಾಗಿವೆ.  ಹಳೆ ಅಡಿಕೆ ಬೆಲೆ ನಿನ್ನೆ ಗರಿಷ್ಠ 500 ರೂ.ಗಳಷ್ಟಿತ್ತು. ಇಂದು 10 ರೂ. ಏರಿಕೆಯಾಗಿದ್ದು 510 ರೂ.ಗೆ ಬಂದು ತಲುಪಿದೆ. ಇಂದು ಡಬಲ್ ಚೋಲ್ ಬೆಲೆಯಲ್ಲೂ 10 ರೂ. ಏರಿಕೆಯಾಗಿದ್ದು 510 ರೂ.ಗಳಾಗಿವೆ.

ಹೊಸ ಫಟೋರ ದರ 370 ರೂ.ಗಳಷ್ಟಿತ್ತು ಇದೀಗ 5 ರೂ. ಇಳಿಕೆಯಾಗಿ 370 ರೂ. ಗಳಾಗಿವೆ. ಆದರೆ ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 10 ರೂ.ಗಳಷ್ಟು ಏರಿಕೆಯಾಗಿದ್ದು 260 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ 10 ರೂ.ಗಳಷ್ಟು ಏರಿಕೆಯಾಗಿದ್ದು ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಆದರೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಮಾತ್ರ ಮತ್ತೆ ನಿರಾಸೆಯಾಗಿದೆ. ಇಂದು ಮತ್ತೆ 5 ರೂ. ಇಳಿಕೆಯಾಗಿದ್ದು 665 ರೂ.ಗಳಾಗಿದೆ. ಇನ್ನು ಒಣಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 190 ರೂ.ಗಳಷ್ಟಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ

Gold Price today: ಮತ್ತೆ ಲಕ್ಷದತ್ತ ಚಿನ್ನದ ದರ

Glance AI App: ಆನ್ ಲೈನ್ ನಲ್ಲಿ ಡ್ರೆಸ್ ಖರೀದಿಸುವಾಗ ಟ್ರಯಲ್ ನೋಡುವುದು ಇನ್ನು ಸುಲಭ

Ranya Rao case: ಪರಮೇಶ್ವರ್ ಸಾಮಾನ್ಯರ ಮದುವೆಗೆ ಬಂದ್ರೂ 20 ಲಕ್ಷ ಗಿಫ್ಟ್ ಕೊಡ್ತಾರಾ

ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಎಂದು ನಾಮಕರಣವಾಗಿರುವುದರಿಂದ ಲಾಭವೇನುಮ ನಷ್ಟವೇನು

ಮುಂದಿನ ಸುದ್ದಿ
Show comments