Webdunia - Bharat's app for daily news and videos

Install App

ಕಳ್ಳನನ್ನು ಕೊಂದ ಯಮರಾಜನ ವಾಹನ ಕೋಣ

Webdunia
ಬುಧವಾರ, 25 ಫೆಬ್ರವರಿ 2015 (13:08 IST)
ಆಗ್ರಾಕ್ಕೆ ಸರಿಸುಮಾರು 25 ಕಿಮೀ ದೂರದ ನಾಗ್ಲಾ ಮಣಿ ಗ್ರಾಮದಲ್ಲಿ ಕೋಣವೊಂದು ಯಮಸ್ವರೂಪಿಯಾಗಿ ತನ್ನ ಕದಿಯಲು ಬಂದ ವ್ಯಕ್ತಿಯನ್ನು ಕೊಂದಿರುವ ಘಟನೆ ಸಂಭವಿಸಿದೆ. ಭಾನುವಾರ ರಾತ್ರಿ ವ್ಯಕ್ತಿಯೊಬ್ಬ ಕೋಣವನ್ನು ಕದಿಯಲು ಬಂದ ವ್ಯಕ್ತಿ ಅದರ ಕೊರಳಿಗೆ ಕೈಹಾಕಿ ಎಳೆದುಕೊಂಡು ಹೋದ.

ಆದರೆ ಮೈದಾನವೊಂದಕ್ಕೆ ತಲುಪುತ್ತಿದ್ದಂತೆ ಕೋಣ ಓಡಲು ಆರಂಭಿಸಿತು. ವ್ಯಕ್ತಿಯ ಕೈ ಕೋಣದ ಕೊರಳಿನ ಸರಪಳಿಗೆ ಸಿಕ್ಕಿಕೊಂಡಿದ್ದರಿಂದ ಸುಮಾರು 2 ಕಿಮೀ ದೂರದವರೆಗೆ ಕೋಣ ಅವನನ್ನು ದರದರನೇ ಎಳೆದುಕೊಂಡು ಹೋಗಿದ್ದರಿಂದ ಅವನು ಮೃತಪಟ್ಟಿದ್ದಾನೆ.   ಎದೆ, ತಲೆ ಮತ್ತು ಹೊಟ್ಟೆಗೆ ಉಂಟಾದ ತೀವ್ರ ಗಾಯಗಳಿಂದ ಅವನು ಮೃತಪಟ್ಟಿದ್ದಾನೆ. ಕಳ್ಳನ ದೇಹಕ್ಕೆ ವಾರಸುದಾರರು ಇದುವರೆಗೆ ಯಾರೂ ಬಂದಿಲ್ಲವೆಂದು ಪೊಲೀಸರು ಹೇಳಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಕೋಣದ ಮಾಲೀಕ ಸತ್ಯಪ್ರಕಾಶ್ ಸೋಮವಾರ ಬೆಳಿಗ್ಗೆ ಎದ್ದು ತನ್ನ ಮನೆಯ ಹೊರಗೆ ಜನರು ನೆರೆದಿರುವುದನ್ನು ಕಂಡ. ಅವನ ಕೋಣ ರಾಮ್ ಪ್ಯಾರಿ ಶೆಡ್ ಹೊರಗಿದ್ದು, ಅದರ ಪಕ್ಕದಲ್ಲಿ ವ್ಯಕ್ತಿಯ ಶವ ಬಿದ್ದಿತ್ತು.  ಕೋಣ ಕಳ್ಳನನ್ನು ಕೊಂದ ಸುದ್ದಿ ಸಮೀಪದ ಗ್ರಾಮಗಳಿಗೆ ಹಬ್ಬಿ ಅನೇಕ ಜನರು ಆ ಕೋಣನನ್ನು ನೋಡಲು ಸೇರಿದರು. ಯಮರಾಜನ ವಾಹನದ ಪ್ರತಿರೂಪ ಎಂದು ಜನರು ಕೋಣನನ್ನು ನೋಡಿ ಉದ್ಗರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments