2ಜಿ ಹಗರಣ : ಮಾಜಿ ಸಿಎಂ ಕರುಣಾನಿಧಿ ಪತ್ನಿ ದಯಾಲು ಅಮ್ಮಲ್ ಹೇಳಿಕೆ ದಾಖಲು
, ಸೋಮವಾರ, 28 ಅಕ್ಟೋಬರ್ 2013 (16:18 IST)
2
ಜಿ ಹಗರಣದ ವಿಷಯವಾಗಿ ಸಿಬಿಐ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪತ್ನಿ ದಯಾಲು ಅಮ್ಮಲ್ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಾವಿರಾರು ಕೋಟಿ ರೂಪಾಯಿಗಳ ಈ ಹಗರಣದಲ್ಲಿ 85 ವರ್ಷ ವಯಸ್ಸಿನ ದಯಾಲು ಅಮ್ಮಲ್ ಹೇಳಿಕೆಯನ್ನು ದಾಖಲಿಸಲು ಆಯುಕ್ತ ಗೋಪಾಲನ್ ಅವರನ್ನು ನೇಮಕಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಬೆಳಿಗ್ಗೆ 9.40 ನಿಮಿಷಕ್ಕೆ ಗೋಪಾಲನ್ ಆರೋಪಿ ಅಮ್ಮಲ್ ಅವರ ಹೇಳಿಕೆ ದಾಖಲಿಸಲು ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಭಾರಿ ಭಧ್ರತೆ ವ್ಯವಸ್ಥೆ ಕಲ್ಪಿಸಿದ್ದರು ಎಂದು ಮೂಲಗಳು ತಿಳಿಸಿವೆ.