2 ಜಿ ಹಗರಣದಲ್ಲಿ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ, 2ಜಿ ಹಗರಣದಿಂದಾಗಿ ನನ್ನ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.
ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅಧಿಕಾರದಲ್ಲಿದ್ದಾಗ 2ಜಿ ಪರವಾನಿಗಿ ಪಡೆಯಲು ಟಾಟಾ ಕಂಪೆನಿ ಯುನಿಟೆಕ್ ಪರವಾಗಿ ಹಣವನ್ನು ನೀಡಿತ್ತು ಎಂದು ಅನಿಲ್ ಅಂಬಾನಿ ಸಿಬಿಐ ಮುಂದೆ ಹೇಳಿಕೆ ನೀಡಿದ್ದಾರೆ.
ಸ್ವಾನ್ ಟೆಲಿಕಾಂ ಕಂಪೆನಿಯ ಶೇರುಹೂಡಿಕೆದಾರರು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ, ರಿಲಯನ್ಸ್ ಕಂಪೆನಿ ಹಗರಣದಲ್ಲಿ ಪ್ರತಿಷ್ಠೆಯನ್ನು ಕಳೆದುಕೊಂಡಿದೆ ಎಂದು ರಿಲಯನ್ಸ್ ಮುಖ್ಯಸ್ಥ ಅಂಬಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.