ಬಹುಕೋಟಿ ಹಗರಣದ ಸತ್ಯಂ ಕಂಪನಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಭಾರತೀಯ ಅಧಿಕಾರಿಗಳು ಅಮೆರಿಕವನ್ನು ಕೋರಿದ್ದಾರೆ.
ಸತ್ಯಂ ಕಂಪೆನಿ ಕುರಿತಂತೆ ಸೆಬಿ ತಾವು ವಿಚಾರಣೆ ನಡೆಸುವುದಾಗಿ ಅಮೆರಿಕದ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಮಿಷನ್ಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ರಾಜಕೀಯ ಹಂತವಾಗಿಯೂ ಕೂಡ ಸತ್ಯಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವಂತೆ ಸೂಚನೆ ರವಾನಿಸಲಾಗಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
ಸತ್ಯಂ ಕಂಪೆನಿ ಹಗರಣವನ್ನು ಸರ್ಕಾರ ಅಮೆರಿಕದ ಅಧಿಕಾರಿಗಳ ಜೊತೆ ಚರ್ಚಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.ಸತ್ಯಂ ಕಂಪನಿಯಿಂದ ವಿದೇಶಿಗಳಲ್ಲಿಯೂ ಕೂಡ ವಂಚನೆಗೊಳಗಾಗಿರುವುದರಿಂದ ಕಂಪನಿಯಿಂದ ಪರಿಹಾರ ನೀಡಬೇಕೆಂದು ಒತ್ತಡ ಹೇರಿದ್ದರು.