Webdunia - Bharat's app for daily news and videos

Install App

ಜಪಾನ್‌ನಲ್ಲಿರೋ ಟೆಕ್ಕಿಗಳಿಗೆ ವಾಪಸ್ ಬುಲಾವ್

Webdunia
ಮಂಗಳವಾರ, 15 ಮಾರ್ಚ್ 2011 (19:36 IST)
ಜಪಾನ್‌ನಲ್ಲಿ ಭೂಕಂಪದಿಂದಾಗಿ ಪರಮಾಣು ವಿಕಿರಣ ಹೊರಸೂಸುವಿಕೆಯ ಭೀತಿ ದಟ್ಟವಾಗತೊಡಗಿದಂತೆಯೇ, ಜಾಗತಿಕ ಸಾಫ್ಟ್‌ವೇರ್ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಟೆಕ್ನಾಲಜೀಸ್ ಮುಂತಾದವು ತಮ್ಮ ಭಾರತೀಯ ಉದ್ಯೋಗಿಗಳು ಮತ್ತವರ ಕುಟುಂಬಿಕರನ್ನು ವಾಪಸ್ ಕರೆಸಿಕೊಳ್ಳತೊಡಗಿವೆ.

ಇನ್ಫೋಸಿಸ್‌ನ ಜಪಾನ್ ಶಾಖೆಯಲ್ಲಿ ಸುಮಾರು 350ರಷ್ಟು ಭಾರತೀಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರೆ, ವಿಪ್ರೋದಲ್ಲಿ 400ರಷ್ಟು ಹಾಗೂ ಟಿಸಿಎಸ್‌ನಲ್ಲಿ ಸುಮಾರು 200ರಷ್ಟು ಮಂದಿ ಭಾರತೀಯರಿದ್ದಾರೆ. ಆದರೆ, ವಿಪ್ರೋ ನೌಕರರನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಇದುವರೆಗೆ ಯಾವುದೇ ಸೂಚನೆಗಳು ಲಭ್ಯವಾಗಿಲ್ಲ.

ತಕ್ಷಣವೇ ಕುಟುಂಬಿಕರೊಂದಿಗೆ ಭಾರತಕ್ಕೆ ಬರುವಂತೆ ಕಂಪನಿಯು ತನ್ನ ನೌಕರರಿಗೆ ಸೂಚಿಸಿದೆ ಎಂದು ಇನ್ಫೋಸಿಸ್ ಸಿಇಒ ಎಸ್.ಗೋಪಾಲಕೃಷ್ಣನ್ ಸುದ್ದಿಗಾರರಿಗೆ ಹೇಳಿದ್ದಾರೆ.

ಟೋಕಿಯೋದಲ್ಲಿರುವ ಡೆವಲಪ್‌ಮೆಂಟ್ ಸೆಂಟರಿನಲ್ಲಿ ನಮ್ಮ 350ರಷ್ಟು ಸಾಫ್ಟ್‌ವೇರ್ ಉದ್ಯೋಗಿಗಳಿದ್ದಾರೆ. ತಕ್ಷಣವೇ ಅವರ ಕುಟುಂಬಿಕರನ್ನು ವಾಪಸ್ ಕಳುಹಿಸುವಂತೆ ಅಥವಾ ಪರಿಸ್ಥಿತಿಯನ್ನು ನೋಡಿಕೊಂಡು ಅಲ್ಲಿ ಉಳಿಯುವಂತೆ ನಾವು ಅವಕಾಶಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಫುಕುಶಿಮಾದ ಡಾಯ್ಚಿ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ವಿಕಿರಣ ಸೋರಿಕೆ ಭೀತಿಯುಂಟಾಗಿರುವ ಹಿನ್ನೆಲೆಯಲ್ಲಿ ಜಪಾನ್‌ನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments