ಎಫ್ಡಿಐ ಜಾರಿಯಿಂದ ದೇಶದಲ್ಲಿ ನಿರುದ್ಯೋಗ ಭೀತಿ; ರಾಜನಾಥ್
ವಾಷಿಂಗ್ಟನ್ , ಗುರುವಾರ, 25 ಜುಲೈ 2013 (16:34 IST)
ಚಿಲ್ಲರೆ ವಹಿವಾಟಿನಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.ದೇಶದ ಆರ್ಥಿಕತೆಯಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯ ಕುರಿತಂತೆ ಮುಕ್ತವಾಗಿ ಸ್ಪಂದಿಸಲು ಬಿಜೆಪಿ ಸಿದ್ದವಿದೆ. ಆದರೆ, ಚಿಲ್ಲರೆ ವಹಿವಾಟಿನಲ್ಲಿ ಎಫ್ಡಿಐ ಹೂಡಿಕೆಗೆ ವಿರೋಧವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಪಕ್ಷ ದೇಶದ ಆರ್ಥಿಕತೆ ಚೇತರಿಕೆಯ ಪರವಾಗಿದೆ, ಎನ್ಡಿಎ ಸರಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಆರ್ಥಿಕತೆ ಭಾರಿ ಚೇತರಿಕೆ ಕಂಡಿತ್ತು ಎಂದು ತಿಳಿಸಿದ್ದಾರೆ.