Webdunia - Bharat's app for daily news and videos

Install App

ಇನ್ನು ಮಂಗಳಮುಖಿಯರೂ ಎಲ್ಐಸಿ ಏಜೆಂಟರಾಗಲಿದ್ದಾರೆ

Webdunia
ಭಾನುವಾರ, 17 ಅಕ್ಟೋಬರ್ 2010 (15:48 IST)
ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮಂಗಳಮುಖಿಯರಿಗೆ ಸಮಾಜದ ವಿವಿಧ ವರ್ಗಗಳು ಸಹಾಯ ಹಸ್ತ ಚಾಚಲು ಮುಂದಾಗುತ್ತಿವೆ. ಆ ಸಾಲಿಗೆ ಎಲ್ಐಸಿ ಜೀವ ವಿಮಾ ಕಂಪನಿಯೂ ಸೇರ್ಪಡೆಯಾಗಲಿದೆ.

ಹೌದು, ಎಲ್ಐಸಿಯು ತನ್ನ ಏಜೆಂಟರನ್ನಾಗಿ ಹಿಜಡಾಗಳನ್ನು ಕೂಡ ನೇಮಕಗೊಳಿಸಲಿದೆ. ಆದರೆ ಇದು ಪ್ರಸಕ್ತ ಪ್ರಸ್ತಾವನೆಯಲ್ಲಿರುವುದು ಚೆನ್ನೈಯಲ್ಲಿ ಮಾತ್ರ ಎಂದು ಪತ್ರಿಕಾ ವರದಿಯೊಂದು ಹೇಳಿದೆ.

ವರದಿಗಳ ಪ್ರಕಾರ ಮಂಗಳಮುಖಿಯರನ್ನು ಏಜೆಂಟರನ್ನಾಗಿ ನೇಮಕ ಮಾಡುವ ಮೊದಲು ಪರೀಕ್ಷೆಯೊಂದನ್ನು ಸಂಘಟಿಸಲಾಗುತ್ತದೆ. ಅದರಲ್ಲಿ ಮೊದಲ ಹಂತದಲ್ಲಿ 30 ಮಂಗಳಮುಖಿಯರನ್ನು ಎಲ್ಐಸಿ ಏಜೆಂಟರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಏಜೆಂಟರಾಗ ಬಯಸುವ ನಗರ ಪ್ರದೇಶಗಳ ಮಂಗಳಮುಖಿಯರ ವಿದ್ಯಾಭ್ಯಾಸ ಪಿಯುಸಿ, ಹಳ್ಳಿಗರಾದರೆ ಎಸ್ಎಸ್ಎಲ್‌ಸಿ ಮಾಡಿದರೆ ಸಾಕಾಗುತ್ತದೆ.

ತಮಿಳುನಾಡಿನ ಇತರ ಜಿಲ್ಲೆಗಳಲ್ಲೂ ಎಲ್ಐಸಿ ಏಜೆಂಟರನ್ನಾಗಿ ಮಂಗಳಮುಖಿಯರನ್ನು ನೇಮಕಗೊಳಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ವಿಸ್ತರಿಸಲಾಗುತ್ತದೆ.

ಲೈಂಗಿಕ ಅಲ್ಪಸಂಖ್ಯಾತರೆಂದು ಸಮಾಜದಲ್ಲಿ ಶೋಷಣೆಗೊಳಗಾಗುತ್ತಿರುವ ವರ್ಗಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಎಲ್ಐಸಿ ಮುಂದಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ನಿರ್ದೇಶಕ ಆರ್. ವಾಸುಕಿ ತಿಳಿಸಿದ್ದಾರೆ.

ಇದರ ಜತೆಗೆ ಇಲ್ಲಿ ಪರಿಗಣಿಸಿರುವ ಮತ್ತೊಂದು ವ್ಯಾಪಾರಿ ಅಂಶವೆಂದರೆ ಮಂಗಳಮುಖಿಯರಿಗೆ ಪೊಲೀಸರು, ಅಂಗಡಿ ಮಾಲಕರು ಮತ್ತು ಇತರ ನೌಕರರ ಪರಿಚಯ ಹೆಚ್ಚಿರುವುದು. ಆ ಮೂಲಕ ಪಾಲಿಸಿಗಳನ್ನು ಹೆಚ್ಚು ಮಾಡಿಕೊಳ್ಳಬಹುದು ಎನ್ನುವುದು ಎಲ್ಐಸಿ ಚಿಂತನೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ