ಬೆಂಗಳೂರು : ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೆದರಿ ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 9 ರಿಂದ 12 ಕ್ಕೆ ಏರಿಕೆ ಘೋಷಿಸಿದೆ.ಇದೆಲ್ಲಾ ಚುನಾವಣೆ ಗಿಮಿಕ್.ಎಂದು ಬಿಜೆಪಿ ಲೇವಡಿ ಮಾಡಿದೆ.
ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 9 ಕ್ಕೆ ಇಳಿಸುವ ನಿರ್ಧಾರವನ್ನು ಸೋನಿಯಾ ಗಾಂಧಿ ತೆಗೆದುಕೊಂಡಿದ್ದಾರೆಯೇ ಇದೀಗ ರಾಹುಲ್ ಗಾಂಧಿ ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 12 ಕ್ಕೆ ಹೆಚ್ಚಳಗೊಳಿಸುತ್ತಿದ್ದಾರೆಯೇ ಎಂದು ಬಿಜೆಪಿ ಮುಖಂಡ ಎಂ.ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.
ಮೋದಿಗೆ ಹೆದರಿ ಕೇಂದ್ರ ಸರಕಾರ ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 9ರ ಬದಲಿಗೆ 12 ಕ್ಕೆಏರಿಸಿದ್ದಾರೆ ಎಂದು ವೆಂಕಯ್ಯಾ ನಾಯ್ಡು ವ್ಯಂಗ್ಯವಾಡಿದ್ದಾರೆ.