Webdunia - Bharat's app for daily news and videos

Install App

ಹುಷಾರು..!

Webdunia
ಗುರುವಾರ, 20 ನವೆಂಬರ್ 2014 (14:24 IST)
ಆತನ ಹೆಂಡತಿ ತೀರಿಕೊಂಡಿದ್ದಳು. ಶವಯಾತ್ರೆ ಇಕ್ಕಟ್ಟಾದ ಸಂಧಿಯಲ್ಲಿ ಸಾಗುತ್ತಿರುವಾಗ ಶವಪೆಟ್ಟಿಗೆಗೆ ಗೋಡೆ ತಾಗಿ ಮುಚ್ಚಳ ತೆರೆದುಕೊಂಡಿತು. ಪಕ್ಕನೆದ್ದು ಬಿಟ್ಟಳು ಹೆಂಡತಿ... ಅವಳು ಸತ್ತಿರಲಿಲ್ಲ...!
 
ಕೆಲ ದಿನಗಳ ನಂತರ ಆಕೆ ಮತ್ತೊಮ್ಮೆ ಸತ್ತಳು. ಶವಯಾತ್ರೆ ಸಾಗುತ್ತಿರುವಾಗ ಈ ಬಾರಿ ಗಂಡ ಹೇಳಿದ,  'ಹುಷಾರು, ಗೋಡೆಗೆ ತಾಗಿಸಬೇಡಿ'..!
 
**********
 
ನೀರು
 
ಹೆಂಡತಿ (ಫೋನ್‌ನಲ್ಲಿ): ಕಾರಿನ ಎಂಜಿನ್‌ಗೆ ನೀರು ಸೇರ್ಕೊಂಡಿದೆ.
 
ಗಂಡ: ಕಾರು ಎಲ್ಲಿದೆ?
 
ಹೆಂಡತಿ: ನೀರಿನೊಳಗೆ ಮುಳುಗಿದೆ..!
 
 
****
 
ಮದುವೆ
 
ಮಗ: ಅಪ್ಪಾ, ಆಫ್ರಿಕಾದಲ್ಲಿ ಮದುವೆ ಆಗುವವರೆಗೆ ಹೆಂಡತಿ ಯಾರು, ಎಂಥವಳು ಎಂದು ಗೊತ್ತೇ ಇರುವುದಿಲ್ಲವಂತೆ, ಹೌದೆ?
 
ಅಪ್ಪ: ಎಲ್ಲಾ ಕಡೇನೂ ಹಾಗೇ ಮಗೂ...!
 
 
*****
ಬೇಕಾಗಿದ್ದಾಳೆ..!
 
'ಹೆಂಡತಿ ಬೇಕಾಗಿದ್ದಾಳೆ' ಎಂದು ಒಬ್ಬಾತ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟ. ಮಾರನೆಯ ದಿನ ಸಾವಿರಾರು ಕಾಗದಗಳು ಬಂದಿದ್ದವು. ಎಲ್ಲದರಲ್ಲೂ ಅದೇ ಡೈಲಾಗ್.. - 'ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬಹುದು'...!
 
 
*********
 
ಲಕ್ಷಾಧೀಶ್ವರ
 
ಆಕೆ: ನನ್ನನ್ನು ಮದುವೆಯಾದ ನಂತರ ಗಂಡ ಲಕ್ಷಾಧೀಶನಾದ.
 
ಸ್ನೇಹಿತೆ: ಹೌದೇ, ಮೊದಲು ಏನಾಗಿದ್ದ?
 
ಆಕೆ: ಕೋಟ್ಯಧೀಶ..!

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments