Webdunia - Bharat's app for daily news and videos

Install App

ಕದ್ದು-ಮುಚ್ಚಿ...

Webdunia
ಗುರುವಾರ, 20 ನವೆಂಬರ್ 2014 (14:21 IST)
ಪರೀಕ್ಷೆ ಬರೆದ ಮೂವರು ಗೆಳೆಯರು ಮಾತಿಗಿಳಿದರು.
 
ಒಬ್ಬ: ನಂಗೆ ಪರೀಕ್ಷೆ ಹಾಲ್‌ನಲ್ಲಿ ಏನೂ ನೆನಪು ಬರ್ಲಿಲ್ಲ. ಹಾಗಾಗಿ ಖಾಲಿ ಉತ್ತರ ಪತ್ರಿಕೆಯನ್ನು ವಾಪಸ್ ಕೊಟ್ಟು ಬಂದೆ.
 
ಮತ್ತೊಬ್ಬ: ನಾನು ಕೂಡ
 
ಮಗದೊಬ್ಬ: ಛೆ.. ಹಾಗೆ ಮಾಡಬಾರದಿತ್ತು. ನಾವು ಮೂವರೂ ಕಾಪಿ ಮಾಡಿದ್ದೇವೆ ಅಂತ ಟೀಚರ್ ಅಂದುಕೊಳ್ತಾರೆ..!
 
 
 
********
 
ಬ್ಯಾಂಕ್ ಕಿತಾಪತಿ
 
ರಾಮುವಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು. ಮರುದಿನ ಹೋದವನೇ ತನ್ನ ಬ್ಯಾಂಕ್ ಅಕೌಂಟನ್ನು ಕ್ಲೋಸ್ ಮಾಡಿ ಬಂದ. 
 
ಯಾಕೆ ಗೊತ್ತಾ?
 
- ಆತ ಅಕೌಂಟ್ ಹೊಂದಿದ್ದ ಬ್ಯಾಂಕ್‌ನ ಸ್ಲೋಗನ್ ಹೀಗಿತ್ತು -- ನಾವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇವೆ..!
 
*****
 
ಗೂಬೆ ನೋಡಿದ್ದೀಯಾ?
 
 
ಅಪ್ಪ: ನೀನ್ಯಾವತ್ತಾದ್ರೂ ಗೂಬೆ ನೋಡಿದ್ದೀಯಾ?
 
ಮಗ ಕೆಳಗೆ ನೋಡುತ್ತಾ: ಇಲ್ಲ..
 
ಅಪ್ಪ: ಕೆಳಗೆ ನೋಡ್ಬೇಡ.. ನನ್ನ ಮುಖ ನೋಡು..!
 
*******
 
ಮದುವೆ-ಡೈವೋರ್ಸ್
 
ಒಬ್ಬ: ಅಡುಗೆ ಮಾಡಿ, ಮನೆ ಕ್ಲೀನ್ ಮಾಡಿ, ಬಟ್ಟೆ ಒಗೆದು ಸಾಕಾಗಿ ಹೋಯ್ತು.. ಅದಕ್ಕೆ ನಾನೀಗ ಮದುವೆಯಾಗಿದ್ದೇನೆ.
 
ಮತ್ತೊಬ್ಬ: ಅದೇ ಕಾರಣಕ್ಕೆ ನಾನು ಡೈವೋರ್ಸ್ ಪಡೆದಿದ್ದೇನೆ...!
 
******
 
ಅಸ್ತಿಪಂಜರ
 
ಸಂದರ್ಶನಕಾರ: ಅಸ್ತಿಪಂಜರ ಎಂದರೇನು?
 
ಉದ್ಯೋಗಾರ್ಥಿ: ವ್ಯಕ್ತಿಯೊಬ್ಬ ಡಯಟ್ ಆರಂಭಿಸಿ ನಿಲ್ಲಿಸಲು ಮರೆತು ಹೋದಾಗ ಒದಗುವ ಸ್ಥಿತಿಯೇ ಅಸ್ತಿಪಂಜರ...!
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments