Webdunia - Bharat's app for daily news and videos

Install App

ಪ್ಲೇ ಆಫ್ ಹಂತ ತಲುಪಲು ಪ್ರತಿಯೊಂದು ಪಂದ್ಯ ಗೆಲ್ಲಲೇಬೇಕು: ಅಂಬಾಟಿ ರಾಯುಡು

Webdunia
ಶನಿವಾರ, 2 ಮೇ 2015 (18:57 IST)
ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಗಳಿಸುವ ಮೂಲಕ ಸತತ ಎರಡನೇ ಗೆಲುವು ಗಳಿಸಿದೆ. ಐಪಿಎಲ್ ಪ್ಲೇ ಆಫ್ ಹಂತಕ್ಕೆ ತಲುಪಲು ಪ್ರತಿಯೊಂದು ಆಟವನ್ನು ಗೆಲ್ಲಲೇಬೇಕು  ಎಂದು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅಬಿಪ್ರಾಯಪಟ್ಟರು. 
 
ನಿಜ ಹೇಳುವುದಾದರೆ ನಮ್ಮ ಪ್ಲೇ ಆಫ್ ಈಗಲೇ ಷುರುವಾಗಿದೆ. ನಾವು ಪ್ರತಿಯೊಂದು ಆಟವನ್ನೂ ಹಾಗೆ ಪರಿಗಣಿಸುವ ಮೂಲಕ ಆ ಮೈಲಿಗಲ್ಲು ಮುಟ್ಟಲು ಪ್ರಯತ್ನಿಸುತ್ತೇವೆ ಎಂದು 53 ರನ್ ಸ್ಕೋರ್ ಮಾಡಿದ ರಾಯುಡು ಹೇಳಿದರು. 
 
ಮುಂಬೈ ಆರಂಭದಲ್ಲಿ ಸತತ ನಾಲ್ಕು ಸೋಲುಗಳಿಂದ ಪಂದ್ಯಾವಳಿ ಆರಂಭಿಸಿತು. ಗುರುವಾರದ ಜಯ 8 ಪಂದ್ಯಗಳಲ್ಲಿ ಅದರ ಮೂರನೇ ಜಯವಾಗಿದ್ದು, ವಾಂಖಡೆ ಕ್ರೀಡಾಂಗಣದಲ್ಲಿ ಎರಡನೇ ಜಯವಾಗಿದೆ. 
 
 ರಾಜಸ್ಥಾನ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 76 ರನ್ ಬಾರಿಸಿದಾಗ ಮುಂಬೈ ಸೋಲಿನ ದವಡೆಯಲ್ಲಿದ್ದರು. ಆದರೆ ಮಿಷೆಲ್ ಮೆಕ್‌ಲಾಗನ್ 18ನೇ ಓವರಿನಲ್ಲಿ ಸ್ಯಾಮ್ಸನ್ ಮತ್ತು ಕರುಣ್ ನಾಯರ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದ್ದು ಪಂದ್ಯ ಮುಂಬೈ ಕಡೆ ವಾಲಿತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments