Select Your Language

Notifications

webdunia
webdunia
webdunia
webdunia

ಪ್ಲೇ ಆಫ್ ಹಂತ ತಲುಪಲು ಪ್ರತಿಯೊಂದು ಪಂದ್ಯ ಗೆಲ್ಲಲೇಬೇಕು: ಅಂಬಾಟಿ ರಾಯುಡು

ಪ್ಲೇ ಆಫ್ ಹಂತ ತಲುಪಲು ಪ್ರತಿಯೊಂದು ಪಂದ್ಯ ಗೆಲ್ಲಲೇಬೇಕು: ಅಂಬಾಟಿ ರಾಯುಡು
ಮುಂಬೈ , ಶನಿವಾರ, 2 ಮೇ 2015 (18:57 IST)
ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಗಳಿಸುವ ಮೂಲಕ ಸತತ ಎರಡನೇ ಗೆಲುವು ಗಳಿಸಿದೆ. ಐಪಿಎಲ್ ಪ್ಲೇ ಆಫ್ ಹಂತಕ್ಕೆ ತಲುಪಲು ಪ್ರತಿಯೊಂದು ಆಟವನ್ನು ಗೆಲ್ಲಲೇಬೇಕು  ಎಂದು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅಬಿಪ್ರಾಯಪಟ್ಟರು. 
 
ನಿಜ ಹೇಳುವುದಾದರೆ ನಮ್ಮ ಪ್ಲೇ ಆಫ್ ಈಗಲೇ ಷುರುವಾಗಿದೆ. ನಾವು ಪ್ರತಿಯೊಂದು ಆಟವನ್ನೂ ಹಾಗೆ ಪರಿಗಣಿಸುವ ಮೂಲಕ ಆ ಮೈಲಿಗಲ್ಲು ಮುಟ್ಟಲು ಪ್ರಯತ್ನಿಸುತ್ತೇವೆ ಎಂದು 53 ರನ್ ಸ್ಕೋರ್ ಮಾಡಿದ ರಾಯುಡು ಹೇಳಿದರು. 
 
ಮುಂಬೈ ಆರಂಭದಲ್ಲಿ ಸತತ ನಾಲ್ಕು ಸೋಲುಗಳಿಂದ ಪಂದ್ಯಾವಳಿ ಆರಂಭಿಸಿತು. ಗುರುವಾರದ ಜಯ 8 ಪಂದ್ಯಗಳಲ್ಲಿ ಅದರ ಮೂರನೇ ಜಯವಾಗಿದ್ದು, ವಾಂಖಡೆ ಕ್ರೀಡಾಂಗಣದಲ್ಲಿ ಎರಡನೇ ಜಯವಾಗಿದೆ. 
 
 ರಾಜಸ್ಥಾನ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 76 ರನ್ ಬಾರಿಸಿದಾಗ ಮುಂಬೈ ಸೋಲಿನ ದವಡೆಯಲ್ಲಿದ್ದರು. ಆದರೆ ಮಿಷೆಲ್ ಮೆಕ್‌ಲಾಗನ್ 18ನೇ ಓವರಿನಲ್ಲಿ ಸ್ಯಾಮ್ಸನ್ ಮತ್ತು ಕರುಣ್ ನಾಯರ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದ್ದು ಪಂದ್ಯ ಮುಂಬೈ ಕಡೆ ವಾಲಿತು.

Share this Story:

Follow Webdunia kannada