ಬಿಸಿಸಿಐ ಪ್ರಾಯೋಜಿತ ಪಂದ್ಯಗಳಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡದಂತೆ ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ನಿಷೇಧ ವಿಧಿಸಲಾಗಿದ್ದರೂ ಟ್ರಿನಿಟಾಡ್ ಮತ್ತು ಟುಬಾಗೋ ಕ್ರಿಕೆಟ್ ಮಂಡಳಿ ಸುನಿಲ್ ಅವರಿಗೆ ಬೆಂಬಲಿಸಿದೆ.
ನಾರಾಯಣ್ ನಿಷೇಧ ಐಪಿಎಲ್ ಪಂದ್ಯಗಳಿಗೆ ಕೂಡ ವಿಸ್ತರಿಸಿದ್ದು, ಟಿಟಿಸಿಬಿಯು ನಾರಾಯಣ್ಗೆ ಪತ್ರ ಬರೆದಿದ್ದು ತನ್ನ ಬೆಂಬಲ ಮತ್ತು ನೆರವಿನ ಸಹಾಯಹಸ್ತ ಚಾಚಿದೆ.
ಅವರಿಗೆ ಅಗತ್ಯವಾದ ಎಲ್ಲಾ ನೆರವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಇದೊಂದು ಪರೀಕ್ಷೆಯ ಕಾಲವಾಗಿದ್ದು, ಈ ಪರಿಸ್ಥಿತಿಯಿಂದ ಹೊರಬಂದು ಜಗತ್ತಿನಲ್ಲಿ ಬ್ಯಾಟ್ಸ್ಮನ್ಗಳನ್ನು ಸಮ್ಮೋಹನಗೊಳಿಸುವ ಅಗತ್ಯ ಸಂಕಲ್ಪ ಅವರಿಗಿದೆ ಎಂದು ಟಿಟಿಸಿಬಿ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಸುರುಜ್ ರಂಗುನಾಥ್ ಹೇಳಿದರು.