Webdunia - Bharat's app for daily news and videos

Install App

ಬೆಂಗಳೂರಿನ ಕೊರೋನಾ ಪರಿಸ್ಥಿತಿಗೆ ನೆರವಾಗಲಿರುವ ಆರ್ ಸಿಬಿ ಕ್ರಿಕೆಟ್ ತಂಡ

Webdunia
ಸೋಮವಾರ, 3 ಮೇ 2021 (09:36 IST)
ಬೆಂಗಳೂರು: ದೇಶದೆಲ್ಲೆಡೆ ಕೊರೋನಾ ರುದ್ರತಾಂಡವವಾಡುತ್ತಿದೆ. ಈ ನಡುವೆ ಐಪಿಎಲ್ ತಂಡಗಳು ತಮ್ಮಿಂದಾದ ದೇಣಿಗೆ, ನೆರವು ನೀಡುತ್ತಿವೆ. ಇದೀಗ ಆ ಸಾಲಿಗೆ ಆರ್ ಸಿಬಿ ಕೂಡಾ ಸೇರಿಕೊಂಡಿದೆ.


ಆರ್ ಸಿಬಿ ಈ ಬಗ್ಗೆ ಪ್ರಕಟಣೆ ನೀಡಿದ್ದು, ವಿರಾಟ್ ಕೊಹ್ಲಿ ಮತ್ತು ತಂಡ ಬೆಂಗಳೂರಿನ ಕೊರೋನಾ ಪೀಡಿತರಿಗೆ ನೆರವಾಗಲಿದೆ ಎಂದು ಹೇಳಿದೆ. ಸದ್ಯಕ್ಕೆ ಬೆಂಗಳೂರು ಮತ್ತು ಇತರ ನಗರಗಳಿಗೆ ವೈದ್ಯಕೀಯ ಸಲಕರಣೆ ತೀರಾ ಅಗತ್ಯವಿದೆ ಎಂದು ಮನಗಂಡು ಆರ್ ಸಿಬಿ ನೆರವಾಗಲಿದೆ.

ಪ್ರತೀ ಬಾರಿ ಆರ್ ಸಿಬಿ ಪರಿಸರ ಕಾಳಜಿಗಾಗಿ ಒಂದು ಪಂದ್ಯವನ್ನು ಹಸಿರು ಜೆರ್ಸಿ ತೊಟ್ಟು ಆಡುತ್ತದೆ. ಆದರೆ ಈ ಬಾರಿ ಪಿಪಿಇ ಕಿಟ್ ಬಣ್ಣದ ನೀಲಿ ಜೆರ್ಸಿ ತೊಟ್ಟು ಒಂದು ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಧರಿಸಿದ ಜೆರ್ಸಿಗಳನ್ನು ಕ್ರಿಕೆಟಿಗರ ಸಹಿ ಪಡೆದು ಹರಾಜಿಗೊಳಪಡಿಸಲಿದೆ. ಈ ಹರಾಜಿನಲ್ಲಿ ಬಂದ ಹಣವನ್ನು ಕೊರೋನಾ ಪರಿಹಾರಕ್ಕೆ ಬಳಸಲಿದೆ ಎಂದು ಆರ್ ಸಿಬಿ ಪ್ರಕಟಿಸಿದೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments