Select Your Language

Notifications

webdunia
webdunia
webdunia
webdunia

ರಸೆಲ್ ಹೊಸ ತಳಿಯ ನಿರ್ಭೀತಿಯ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ: ಗಂಭೀರ್

ರಸೆಲ್  ಹೊಸ ತಳಿಯ ನಿರ್ಭೀತಿಯ ಕ್ರಿಕೆಟಿಗರ ಸಾಲಿಗೆ  ಸೇರಿದ್ದಾರೆ: ಗಂಭೀರ್
ಪುಣೆ , ಸೋಮವಾರ, 20 ಏಪ್ರಿಲ್ 2015 (18:59 IST)
ತಮ್ಮ ತಂಡದ ಆಟಗಾರ ಆಂಡ್ರೆ ರಸೆಲ್ ಅವರನ್ನು ಶ್ಲಾಘಿಸಿದ ಕೋಲ್ಕತಾ ನೈಟ್ ರೈಡರ್ಸ್  ಜಮೈಕಾದ ಆಟಗಾರ ನಿರ್ಭೀತಿ ಆಟಗಾರರ ಹೊಸ ಸಂತತಿಗೆ ಸೇರಿದ್ದಾರೆಂದು ಹೇಳಿದ್ದಾರೆ.  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದ ತಂಡವನ್ನು  ರಸೆಲ್ ಗೆಲುವಿನ ಗುರಿ ಮುಟ್ಟಿಸಿದ್ದರು.  ಅವರ 36 ಎಸೆತಗಳಲ್ಲಿ 66 ಅಬ್ಬರದ ರನ್ ನೆರವಿನಿಂದ ಗೆಲುವನ್ನು ತಂದುಕೊಟ್ಟಿದ್ದರು. 
 
 ಮೇಲಿನ ಕ್ರಮಾಂಕದ ಆಟಗಾರರು ಪತನಗೊಂಡ ಬಳಿ ನಾವು ಒತ್ತಡದಲ್ಲಿದ್ದೆವೆ. ಆದರೆ  ರಸೆಲ್ ಮತ್ತು ಯೂಸುಫ್ ಪಠಾಣ್  ಕ್ರೀಸ್‌ನಲ್ಲಿ ಇರುವವರೆಗೆ ಸೋಲಿನ ಭೀತಿಯಿಲ್ಲ ಎಂದು ನಂಬಿದ್ದಾಗಿ ಗಂಭೀರ್ ಹೇಳಿದರು. 
 
‘ಐಪಿಎಲ್‌ನಲ್ಲಿ ನಾವು ಅನೇಕ ಪ್ರತಿಭಾಶಾಲಿ  ಆಟಗಾರರನ್ನು ಕಂಡಿದ್ದು ಅವರ ಪೈಕಿ  ರಸೆಲ್‌ ಕೂಡಾ ಒಬ್ಬರಾಗಿದ್ದಾರೆ. ಅವರು ಎಂತಹ ಕಠಿಣ ಸನ್ನವೇಶದಲ್ಲೂ ಲೀಲಾಜಾಲವಾಗಿ ರನ್ ಸ್ಕೋರ್ ಮಾಡುವ ಕೌಶಲ್ಯ ಅವರಿಗೆ ಕರಗತವಾಗಿದೆ ಎಂದು ಎಂದು ಗಂಭೀರ್‌ ತಿಳಿಸಿದ್ದಾರೆ.
 
 

Share this Story:

Follow Webdunia kannada