Webdunia - Bharat's app for daily news and videos

Install App

ಮೊದಲ ಪಂದ್ಯದಲ್ಲೇ ಆರ್`ಸಿಬಿ ಸೋಲಿಗೆ 5 ಕಾರಣಗಳು

Webdunia
ಗುರುವಾರ, 6 ಏಪ್ರಿಲ್ 2017 (09:01 IST)
ಐಪಿಎಲ್ ಆರಂಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35 ರನ್`ಗಳ ಸೋಲನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ. ಕೊಹ್ಲಿ, ಡಿವಿಲಿಯರ್ಸ್`ರಂತಹ ಘಟಾನುಘಟಿ ಆಟಗಾರರ ಅನುಪಸ್ಥಿತಿ ತಂಡವನ್ನ ಇನ್ನಿಲ್ಲದಂತೆ ಕಾಡಿತ್ತು. ಪ್ರತಿಭಾವಂತ ಯುವ ಆಟಗಾರರಿದ್ದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.

ಟರ್ನಿಂಗ್ ಪಾಯಿಂಟ್:
ರಶೀದ್ ಧಮಾಕಾ: ಐಪಿಎಲ್`ಗೆ ಪಾದಾರ್ಪಣೆ ಮಾಡಿದ ಆಫ್ಘಾನಿಸ್ತಾನದ ರಶೀದ್ ಖಾನ್, ಆರಂಭಿಕ ಮಂದೀಪ್ ಸಿಂಗ್ ವಿಕೆಟ್ ಉರುಳಿಸಿದ್ದು, ಆಟದ ಟರ್ನಿಂಗ್ ಪಾಯಿಂಟ್. 208 ರನ್`ಗಳ ಬೃಹತ್ ಗುರಿ ಬೆನ್ನತ್ತಿದ ಆರ್`ಸಿಬಿಗೆ ಗೇಲ್ ಮತ್ತು ಮಂದೀಪ್ ಉತ್ತಮ ಆರಂಭವನ್ನೇ ಒದ್ದಗಿಸಿದ್ದರು. 6 ಓವರ್`ಗೆ 56 ರನ್ ಗಳಿಸಿ ಸುಸ್ಥಿಯಲ್ಲಿದ್ದಾಗ ಬೌಲಿಂಗ್ ದಾಳಿಗಿಳಿದ ರಶೀದ್, ಮಂದೀಪ್ ಅವರನ್ನ ಗೂಗ್ಲಿ ಬಲೆಗೆ ಕೆಡವಿ ಬೌಲ್ಡ್ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಸಹ ಔಟ್ ಮಾಡಿ ಆರ್`ಸಿಬಿಗೆ ಆಘಾತ ನೀಡಿದರು.

ಬೆನ್ ಕಟಿಂಗ್ಸ್ ಸೂಪರ್ ಥ್ರೋ: ವಿಕೆಟ್ ಉರುಳುತ್ತಿದ್ದರೂ ಹೈದ್ರಾಬಾದ್ ಬೌಲರ್`ಗಳ ಬೆವರಿಳಿಸುತ್ತಿದ್ದ ಆಲ್ರೌಂಡರ್ ಕೇದಾರ್ ಜಾಧವ್ ರನೌಟ್ ತಂಡಕ್ಕೆ ಮರ್ಮಾಘಾತ ನೀಡಿತು. ಬೆನ್ ಕಟಿಂಗ್ಸ್ ಬೌಂಡರಿ ಲೈನ್ ಬಳಿಯಿಂದ ಎಸೆದ ಸೂಪರ್ ಥ್ರೋ ಜಾಧವ್ ಕ್ರೀಸ್ ಮುಟ್ಟುವ ಮೊದಲೇ ಬೇಲ್ಸ್ ಎಗರಿಸಿತ್ತು.

ಯುವಿ ಕ್ಯಾಚ್ ಬಿಟ್ಟ ಅರವಿಂದ್: ಚೌಧರಿ ಬೌಲಿಂಗ್`ನಲ್ಲಿ ಯುವಿ ನಿಡಿದ ಕ್ಯ಻ಚನ್ನ ಅರವಿಂದ್ ಡ್ರಾಪ್ ಮಾಡಿದ್ದು, ತಂಡಕ್ಕೆ ದುಬಾರಿಯಾಯ್ತು. 27 ಎಸೆತಗಳಲ್ಲಿ 62 ರನ್ ಸಿಡಿಸಿದ ಯುವಿ ತಂಡದ ಸ್ಕೋರ್ 200ರಗಡಿ ದಾಟಲು ನೆರವಾದರು.
 
ಕಾಡಿದ ಹಿರಿಯ ಆಟಗಾರರು ಅನುಪಸ್ಥಿತಿ:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ೆ ತಕ್ಕ ಮೇಲೆ ಬಹುವಾಗಿ ಅವಲಂಬಿಸಿದ್ದು, ಅವರಿಲ್ಲದೆ ಆಡುವುದು ಕಷ್ಟ ಎನ್ನುವಂತಾಗಿದೆ. ಕೆಳ ಕ್ರಮಾಂಕದ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ಶೇನ್ ವ್ಯಾಟ್ಸನ್ ಸಹ ತಂಡವನ್ನ ಗೆಲುವಿಮ ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಕುಸಿದ ಕ್ರಿಸ್ ಗೇಲ್: ಕ್ರಿಸ್ ಗೇಲ್ ಆಟದಲ್ಲಿ ಹಿಂದಿನ ಖದರ್ ಕಾಣುತ್ತಿಲ್ಲ. ಮೊದ ಮೊದಲು ಒಂದೆರಡು ಬಿಗ್ ಶಾಟ್ ಸಿಡಿಸುವ ಗೇಲ್ ತಂಡವನ್ನ ಗೆಲುವಿನತ್ತ ಕೊಂಡೊಯ್ಯುತ್ತಿಲ್ಲ. ಒಂದೆರಡು ವಿಕೆಟ್ ಉರುಳಿದರೆ ಸಾಕು ಪ್ಯಾನಿಕ್`ಗೆ ಒಳಗಾಗುವ ಗೇಲ್ ಆತುರಾತುರವಾಗಿ ಆಡಿ ವಿಕೆಟ್ ಒಪ್ಪಿಸುತ್ತಾರೆ. ನಿನ್ನೆ ನಡೆದಿದ್ದು ಸಹ ಅದೇ. ಕ್ರೀಸ್`ಗೆ ಕಚ್ಚಿ ನಿಂತು ಇನ್ನಿಂಗ್ಸ್ ಕಟ್ಟುವ ತಾಳ್ಮೆ ತೋರುತ್ತಿಲ್ಲ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments