Webdunia - Bharat's app for daily news and videos

Install App

ಏರಾನ್ ಫಿಂಚ್ ರನ್ನು ಮಂಕಡ್ ಔಟ್ ಮಾಡದೇ ಇರುವುದಕ್ಕೆ ಕಾರಣ ತಿಳಿಸಿದ ಆರ್ ಅಶ್ವಿನ್

Webdunia
ಗುರುವಾರ, 8 ಅಕ್ಟೋಬರ್ 2020 (09:41 IST)
ದುಬೈ: ಅವಕಾಶವಿದ್ದರೂ ಆರ್ ಸಿಬಿ ಬ್ಯಾಟ್ಸ್ ಮನ್ ಏರಾನ್ ಫಿಂಚ್ ರನ್ನು ಔಟ್ ಮಾಡದೇ ಇರುವುದಕ್ಕೆ ನಿಜ ಕಾರಣವೇನೆಂದು ರವಿಚಂದ್ರನ್ ಅಶ್ವಿನ್ ವಿವರಿಸಿದ್ದಾರೆ.


ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಅಶ್ವಿನ್ ಆರ್ ಸಿಬಿ ಆರಂಭಿಕ ಏರಾನ್ ಫಿಂಚ್ ರನ್ನು ಮಂಕಡ್ ಔಟ್ ಮಾಡುವುದಾಗಿ ಎಚ್ಚರಿಕೆ ನೀಡಿ ಸುಮ್ಮನಾಗಿದ್ದರು. ಬಳಿಕ ಟ್ವಿಟರ್ ಮೂಲಕ ಬಾಲ್ ಎಸೆಯುವ ಮೊದಲೇ ಕ್ರೀಸ್ ಬಿಡುವ ಬ್ಯಾಟ್ಸ್ ಮನ್ ಗಳಿಗೆ ಎಚ್ಚರಿಕೆ ನೀಡಿದ್ದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಏರಾನ್ ನನಗೆ ಪಂಜಾಬ್ ತಂಡದಲ್ಲಿದ್ದಾಗಲೇ ಗೊತ್ತು. ಆತ ನನಗೆ ಒಳ್ಳೆಯ ಸ್ನೇಹಿತ. ನಾನು ಚೆಂಡು ಹಿಡಿದು ಎಚ್ಚರಿಕೆ ನೀಡುವಾಗ ನನ್ನ ಕಡೆಗೆ ದಿಟ್ಟಿಸಿ ನೋಡುತ್ತಿದ್ದೆ. ನನಗೆ ಸುಮ್ಮನೇ ಈ ವಿಚಾರವಾಗಿ ವಿವಾದ ಮಾಡುವುದು ಬೇಡವೆನಿಸಿತು. ಆದರೆ ಕೋಚ್ ರಿಕಿ ಪಾಂಟಿಂಗ್ ಕೂಡಾ ಮಂಕಡ್ ಔಟ್ ಮಾಡಲು ಬೆಂಬಲಿಸಿದ್ದರು. ಆದರೆ ಐಸಿಸಿ ಈ ರೀತಿ ಮುಂದೆ ಬರುವ ಬ್ಯಾಟ್ಸ್ ಮನ್ ಗಳಿಗೆ ಔಟ್ ನೀಡುವ ಬದಲು ಬೇರೆ ಶಿಕ್ಷೆ ನೀಡುವುದು ಉತ್ತಮ’ ಎಂದು ಅಶ್ವಿನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

RCB Bengaluru stampede: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಸಾವು, ನಮ್ಮ ಮೆಟ್ರೋ ಸ್ಥಗಿತ

RCB Victory Parade: M.ಚಿನ್ನಸ್ವಾಮಿಗೆ ಉಚಿತ ಪಾಸ್‌ಗಳು ಲಭ್ಯ

RCB in Bengaluru: ಆಹಾ ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಚಂದ video

ಮುಂದಿನ ಸುದ್ದಿ
Show comments