Webdunia - Bharat's app for daily news and videos

Install App

ತಂದೆ ಸಾವಿಗೀಡಾಗಿದ್ದರೂ ಆಡಿ ಪಂಜಾಬ್ ಗೆಲ್ಲಿಸಿದ ಮನ್ ದೀಪ್ ಸಿಂಗ್

Webdunia
ಮಂಗಳವಾರ, 27 ಅಕ್ಟೋಬರ್ 2020 (09:13 IST)
ದುಬೈ: ಐಪಿಎಲ್ 13 ರಲ್ಲಿ ತಂದೆ ಸಾವಿಗೀಡಾದರೂ ಆ ದುಃಖವನ್ನು ನುಂಗಿ ತಂಡಕ್ಕಾಗಿ ಆಡಿದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಕತೆಯನ್ನು ಕೇಳಿದ್ದೇವೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಕೆಕೆಆರ್ ವಿರುದ್ಧ ಅದ್ಭುತ ಜಯ ಗಳಿಸಿಕೊಟ್ಟ ಬ್ಯಾಟ್ಸ್ ಮನ್ ದೀಪ್ ಸಿಂಗ್ ಕೂಡಾ ಅಂತಹದ್ದೇ ಸ್ಥಿತಿಯಲ್ಲಿ ಆಡಿದ್ದು ಬಹಿರಂಗವಾಗಿದೆ.


ಮನ್ ದೀಪ್ ಸಿಂಗ್ ತಂದೆ ಲಿವರ್ ಸಮಸ್ಯೆಯಿಂದಾಗಿ ಮೊನ್ನೆಯಷ್ಟೇ ಸಾವಿಗೀಡಾಗಿದ್ದರು. ಆದರೆ ಮಯಾಂಕ್ ಅಗರ್ವಾಲ್ ಗಾಯಗೊಂಡಿದ್ದರಿಂದ ಪಂಜಾಬ್ ಗೆ ಮನ್ ದೀಪ್ ಆರಂಭಿಕರಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಿತ್ತು. ಹೀಗಾಗಿ ತಂದೆಯ ಅಂತ್ಯಸಂಸ್ಕಾರಕ್ಕೆ ತೆರಳದೇ ತಂಡದ ಪರ ನಿನ್ನೆಯ ಪಂದ್ಯವಾಡಿದ್ದಲ್ಲದೆ, ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದರು. ಅಜೇಯ 66 ರನ್ ಗಳಿಸಿದ ಮನ್ ದೀಪ್ ಈ ಇನಿಂಗ್ಸ್ ನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. ಅವರು ನಾನು ಯಾವತ್ತೂ ನಾಟೌಟ್ ಆಗಿ ಇರಬೇಕೆಂದು ಬಯಸಿದ್ದರು. ಅದು ಇಂದು ಸಾಧ‍್ಯವಾಗಿದೆ ಎಂದು ದುಃಖದಿಂದಲೇ ಹೇಳಿಕೊಂಡಿದ್ದಾರೆ. ಇನ್ನು, ಮನ್ ದೀಪ್ ಸಾಧನೆ ಕೊಂಡಾಡಿರುವ ಸಹ ಆಟಗಾರ ಕ್ರಿಸ್ ಗೇಲ್ ಅಪ್ಪನಿಗಾಗಿ ಆಡಿದ ಅವರ ಅರ್ಪಣಾ ಮನೋಭಾವಕ್ಕೆ ಸಲಾಂ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೆಳೆಯ ಪ್ರಸಿದ್ಧನಿಗಾಗಿ ಅಂಪಾಯರ್ ಜೊತೆ ಕಿತ್ತಾಟಕ್ಕಿಳಿದ ಕೆಎಲ್ ರಾಹುಲ್

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

ಮುಂದಿನ ಸುದ್ದಿ
Show comments