ಬೆಂಗಳೂರು: ಸತತ ಸೋಲಿನಿಂದ ಆರ್ ಸಿಬಿ ಕಂಗೆಟ್ಟಿದೆ. ಇಷ್ಟೊಂದು ಸೋಲಿನ ಸರಪಳಿ ನಾನು ಜೀವಮಾನದಲ್ಲಿ ಕಂಡಿರಲೇ ಇಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹತಾಶೆಯಿಂದ ಹೇಳಿದ್ದಾರೆ.
‘ಒಂದು ತಂಡ ಒಂದೇ ಋತುವಿನಲ್ಲಿ ಇಷ್ಟೊಂದು ಸೋಲು ಕಂಡಿದ್ದು ನಾನು ನೋಡಿರಲೇ ಇಲ್ಲ. ಈ ಸೋಲಿಗೆ ಏನು ಹೇಳಬೇಕೆಂದೇ ನನಗೆ ಗೊತ್ತಾಗುತ್ತಿಲ್ಲ’ ಎಂದು ಕೊಹ್ಲಿ ನಿರಾಸೆ ವ್ಯಕ್ತಪಡಿಸಿದ್ದಾರೆ.
ಈ ಋತುವಿನಲ್ಲಿ ಕೊಹ್ಲಿಯಿಂದ ಹಿಡಿದು ಗೇಲ್ ವರೆಗೆ ಎಲ್ಲಾ ಆರ್ ಸಿಬಿ ಆಟಗಾರರು, ವಿಫಲರಾಗಿದ್ದಾರೆ. ಸಂಘಟಿತ ಹೋರಾಟ ನೀಡದ ಆರ್ ಸಿಬಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
‘ನಾವು ಎಷ್ಟೇ ಪ್ರಯತ್ನ ನಡೆಸಿದರೂ, ದೊಡ್ಡ ಮೊತ್ತ ಗಳಿಸಲು ದಾರಿ ಕಾಣುತ್ತಿಲ್ಲ. ವಿಕೆಟ್ ಗಳು ಪಟ ಪಟನೆ ಉದುರುತ್ತಿದ್ದರೂ, ಅದಕ್ಕೆ ಕಾರಣ ತಿಳಿಯುತ್ತಿಲ್ಲ. ಒಟ್ಟಾರೆ ಹೇಳಬೇಕೆಂದರೆ ಈ ಋತುವಿನಲ್ಲಿ ನಮ್ಮ ಪ್ರದರ್ಶನ ನಮಗೆ ಬೇಕಾದಂತಿರಲಿಲ್ಲ’ ಎಂದು ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ