ಗೌತಮ್ ಗಂಭೀರ್ ಗಾಗಿ ಅಭಿಮಾನಿಗಳ ಅಭಿಯಾನ

Webdunia
ಭಾನುವಾರ, 30 ಏಪ್ರಿಲ್ 2017 (07:48 IST)
ನವದೆಹಲಿ: ಐಪಿಎಲ್ ನಲ್ಲಿ ಇದೀಗ ವಿರಾಟ್ ಕೊಹ್ಲಿಗಿಂತಲೂ, ಧೋನಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಆಟಗಾರ ಗೌತಮ್ ಗಂಭೀರ್. ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕನ ಪರ ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದಾರೆ.

 
ಮತ್ತೆ ಗಂಭೀರ್ ರನ್ನು ಟೀಂ ಇಂಡಿಯಾಕ್ಕೆ ಕರೆಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. #ಬ್ರಿಂಗ್ ಬ್ಯಾಕ್ ಜಿಜಿ ಎಂಬ ಅಭಯಾನ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.

ಗಂಭೀರ್ ಈ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಸಂಪಾದಿಸಿರುವುದಷ್ಟೇ ಅಲ್ಲ, ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ. ತಮ್ಮ ತಂಡವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ದಿರುವ ಗಂಭೀರ್ ಉತ್ತಮ ನಾಯಕ ಎಂದೂ ಹೊಗಳಿಸಿಕೊಂಡಿದ್ದಾರೆ.

ಅದೂ ಸಾಲದೆಂಬಂತೆ, ಸುಕ್ಮಾ ದಾಳಿಗೊಳಗಾದ ಯೋಧರ ಮಕ್ಕಳ ನೆರವಿಗೆ ಬರುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತೋ ಬಿಡುತ್ತೋ, ಬೇರೆ ಟೂರ್ನಿಗಾದರೂ ಸರಿಯೇ, ಒಂದು ಕಾಲದಲ್ಲಿ ಭಾರತ ತಂಡದ ಖಾಯಂ ಓಪನರ್ ಆಗಿದ್ದ ಗಂಭೀರ್ ರನ್ನು ಮರಳಿ ಕರೆ ತನ್ನಿ ಎಂದು ಅಭಿಮಾನಿಗಳು ಮೊರೆಯಿಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

IPL 2026: ಸೂರ್ಯವಂಶಿಗೆ ದಾಖಲೆಯ ಶತಕ ಜಸ್ಟ್‌ಮಿಸ್‌: ಸನ್‌ರೈಸರ್ಸ್‌ ತಂಡಕ್ಕೆ ಕಠಿಣ ಗುರಿ ನೀಡಿದ ರಾಯಲ್ಸ್‌

IPL 2026: ದೈತ್ಯ ಬ್ಯಾಟರ್‌ ಕ್ರೀಸ್‌ ಗೇಲ್ ಸಿಕ್ಸರ್‌ ದಾಖಲೆಯನ್ನು ಉಡೀಸ್‌ ಮಾಡಿದ ವೈಭವ್‌ ಸೂರ್ಯವಂಶಿ

IPL 2026: ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಸನ್‌ರೈಸರ್ಸ್‌: ರಾಯಲ್ಸ್‌ಗೆ ಆರಂಭಿಕ ಆಘಾತ

IPL 2026: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿಗೆ ಮಾಜಿ ಮಾಲೀಕ ವಿಜಯ್‌ ಮಲ್ಯರಿಂದ ವಿಶ್‌

ಮುಂದಿನ ಸುದ್ದಿ
Show comments