ಚೆನ್ನೈ: ಕಳೆದ ಎರಡು ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಐಪಿಎಲ್ ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಕ್ರಿಯಾಶೀಲವಾಗಿದೆ.
ಭಾನುವಾರ ಮುಕ್ತಾಯಗೊಂಡ ಐಪಿಎಲ್ ಫೈನಲ್ ನಲ್ಲಿ ಗೆದ್ದ ಮುಂಬೈ ತಂಡಕ್ಕೆ ಶುಭಾಷಯ ಕೋರಿರುವ ಚೆನ್ನೈ, ಮುಂದಿನ ಆವೃತ್ತಿಗೆ ಆಗಮಿಸುವುದಾಗಿ ಘೋಷಿಸಿಕೊಂಡಿದೆ. ಮತ್ತೆ ಈ ತಂಡಕ್ಕೆ ಧೋನಿ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಮುಂದಿನ ಆವೃತ್ತಿಗೆ ಚೆನ್ನೈ ಮಾತ್ರವಲ್ಲದೆ, ರಾಜಸ್ಥಾನ್ ರಾಯಲ್ಸ್ ಕೂಡಾ ಕಣಕ್ಕಿಳಿಯಲಿದೆ. ಇದರಿಂದಾಗಿ ಪುಣೆ ಮತ್ತು ಗುಜರಾತ್ ತಂಡಗಳು ಸ್ಥಾನ ಕಳೆದುಕೊಳ್ಳಲಿವೆ. ಹೀಗಾಗಿಯೇ ಏನೋ, ಚೆನ್ನೈ ತಂಡ ತನ್ನ ಟ್ವಿಟರ್ ನಲ್ಲಿ ಪುಣೆ ತಂಡಕ್ಕೂ ಅಭಿನಂದನೆ ಸಲ್ಲಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ