Webdunia - Bharat's app for daily news and videos

Install App

ಟೆಡ್ಡಿ ಡೇ ಯಾಕೆ ಆಚರಿಸುತ್ತಾರೆ ಗೊತ್ತಾ? ಈ ಹೆಸರು ಬಂದಿದ್ದು ಹೇಗೆ?

Krishnaveni K
ಶನಿವಾರ, 10 ಫೆಬ್ರವರಿ 2024 (10:19 IST)
ಬೆಂಗಳೂರು: ವಾಲೆಂಟೈನ್ ವೀಕ್ ನಲ್ಲಿ ಇಂದು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಹಾಗಿದ್ದರೆ ಟೆಡ್ಡಿ ಡೇ ಎಂದರೇನು ಯಾಕೆ ಆಚರಿಸುತ್ತಾರೆ ಇಲ್ಲಿ ನೋಡಿ.

ಪ್ರತೀ ವರ್ಷ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮೃದುವಾದ ಮುದ್ದಾದ ಗೊಂಬೆಗಳನ್ನು ಮಕ್ಕಳು ಮಾತ್ರವಲ್ಲ, ದೊಡ್ಡವರೂ ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಹುಡುಗಿಯರಿಗೆ ಟೆಡ್ಡಿ ಮೇಲೆ ವಿಶೇಷ ಪ್ರೀತಿಯಿರುತ್ತದೆ.

ಟೆಡ್ಡಿ ಹೆಸರು ಬಂದಿದ್ದು ಹೇಗೆ?
ಟೆಡ್ಡಿ ಎಂಬ ಹೆಸರು ಬಂದಿದ್ದಕ್ಕೆ ಒಂದು ವಿಶಿಷ್ಟ ಹಿನ್ನಲೆಯಿದೆ. ಅಮೆರಿಕಾದ 26 ನೇ ಅಧ್ಯಕ್ಷ ಟೆಡ್ಡಿ ರೂಸ್ ವೆಲ್ಟ್  ಅವರಿಂದಾಗಿ ಈ ಹೆಸರು ಬಂತು ಎನ್ನಲಾಗುತ್ತದೆ. ಈ ದಿನ ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ನೀಡಿ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಟೆಡ್ಡಿಯ ಹಾಗೆಯೇ ಪ್ರೀತಿ ಪಾತ್ರರ ಜೀವನವೂ ಮೃದುವಾಗಿ, ಹಸನಾಗಿರಲಿ ಎಂದು ಹಾರೈಸುವುದೇ ಇದರ ಉದ್ದೇಶ.

ಆಚರಿಸುವುದು ಹೇಗೆ?
ಟೆಡ್ಡಿ ಡೇಯಂದು ನಿಮ್ಮ ಪ್ರೀತಿ ಪಾತ್ರರಿಗೆ ಅವರ ಟೇಸ್ಟ್ ಗೆ ಹೊಂದುವಂತಹ ಟೆಡ್ಡಿ ಜೊತೆಗೆ ಒಂದು ಸುಂದರವಾದ ಪ್ರೀತಿಯ ಸಾಲುಗಳನ್ನು ಬರೆದು ಉಡುಗೊರೆಯಾಗಿ ನೀಡಬಹುದು. ಇದು ಒಂದು ರೀತಿಯಲ್ಲಿ ಆಟಿಕೆ ಇರಬಹುದು. ಆದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಉಡುಗೊರೆಯಾಗಿ ನೀಡಬಹುದಾದಂತಹ ಸಾಧನವಾಗಿದೆ. ಹೀಗಾಗಿಯೇ ಪ್ರೇಮಿಗಳ ಆಯ್ಕೆಯಲ್ಲಿ ಈ ಉಡುಗೊರೆಗೆ ವಿಶೇಷ ಸ್ಥಾನವಿದೆ. ಅಲ್ಲದೆ, ಟೆಡ್ಡಿ ನೋಡಿದರೆ ನಮಗೆ ಮುದ್ದ ಮಾಡಬೇಕು ಎನಿಸುವುದು ಸಹಜ. ಅದೇ ರೀತಿ ಇಬ್ಬರ ನಡುವಿನ ಪ್ರೀತಿಯೂ ಅಷ್ಟೇ ಮುದ್ದಾಗಿರಲಿ ಎಂದು ಸಂದೇಶ ರವಾನಿಸಿದಂತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೈ ಹೈಕಮಾಂಡ್‌ ಶಾಕ್‌: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರಿಗೂ ನಿರಾಸೆ

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್‌ ಹೇಳಿದ್ದೇನು ಗೊತ್ತಾ

Mallikarjun Kharge: ಕಾಲ್ತುಳಿತ ಆಕಸ್ಮಿಕವಾಗಿ ನಡೆದಿದ್ದು ನಮ್ಮವ್ರು ಕ್ಷಮೇನೂ ಕೇಳವ್ರೆ: ಮಲ

Karnataka caste census: 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆ: ವಿ.ಸುನೀಲ್ ಕುಮಾರ್

Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಕೊಬ್ಬರಿ ಬೆಳೆಗಾರರಿಗೆ ಬಂಪರ್

ಮುಂದಿನ ಸುದ್ದಿ
Show comments