Webdunia - Bharat's app for daily news and videos

Install App

ಬೆಲೂಚಿಸ್ತಾನ ಕುರಿತು ಮೋದಿ ಪ್ರತಿಕ್ರಿಯೆಯಿಂದ ಚೀನಾಗೇಕೆ ಚಿಂತೆ?

Webdunia
ಸೋಮವಾರ, 29 ಆಗಸ್ಟ್ 2016 (19:56 IST)
ಪ್ರಕ್ಷುಬ್ಧ ಪೀಡಿತ ಬಲೂಚಿಸ್ತಾನವನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದು ಅನೇಕ ಮಂದಿ ಬೀಜಿಂಗ್ ವ್ಯೂಹಾತ್ಮಕ ತಜ್ಞರಿಗೆ ಕಳವಳ ಉಂಟುಮಾಡಿದೆ. ಈ ಪ್ರದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂದು ಕೆಲವರು ಅಭಿಪ್ರಾಯಪಟ್ಟರು.
 
ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಪಶ್ಚಿಮ ಕ್ಸಿಂಜಿಯಾಂಗ್ ಪ್ರಾಂತ್ಯದಿಂದ ಬಲೂಚಿಸ್ತಾನದ ಗ್ವಾಡಾರ್ ಬಂದರಿನವರೆಗೆ ವ್ಯಾಪಿಸಿದ್ದು, ಭಾರತ ಈ ಯೋಜನೆಗೆ ಆಕ್ಷೇಪಿಸಿದೆ.

ಏಕೆಂದರೆ ಈ ಯೋಜನೆ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದ ಮೂಲಕ ಹಾದುಹೋಗಿದ್ದು, ಇದನ್ನು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವೆಂದು ಭಾರತ ಪ್ರತಿಪಾದಿಸಿದೆ. 
 
ಅಶಾಂತಿ ಪೀಡಿತ ಬಲೂಚಿಸ್ತಾನದಲ್ಲಿ ದಂಗೆಯನ್ನು ಪಾಕಿಸ್ತಾನ ನಿರ್ದಯವಾಗಿ ಅಡಗಿಸುತ್ತಿದ್ದು, ಭಾರತ ಈ ಕಾರಿಡಾರ್ ನಿರ್ಮಾಣವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ಕಡೆ ಚೀನಾದ ಭದ್ರತಾ ತಜ್ಞರು ಬೆಟ್ಟು ತೋರಿಸುತ್ತಾ ಹೇಳಿದ್ದಾರೆ. ಇದರಿಂದ ಭಾರತ ಚೀನಾ ಸಂಬಂಧ ಹಾನಿಗೊಳಿಸುತ್ತದೆಂದೂ ಚೀನಾದಿಂದ ಪ್ರತ್ಯುತ್ತರ ಕೂಡ ಬರಬಹುದೆಂದು ಅವರು ಎಚ್ಚರಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments