ಕೇರಳದ ದಿವಂಗತ ಫಾದರ್ ಕುರಿಯಕೋಸ್ ಇಲಿಯಾಸ್ ಚಾವರ ಮತ್ತು ದಿವಂಗತ ಸಿಸ್ಟರ್ ಯುಫ್ರೇಸಿಯಾ ಅವರಿಗೆ ಮರಣೋತ್ತರವಾಗಿ ಸಂತ ಪದವಿಯನ್ನು ಪ್ರದಾನ ಮಾಡಲಾಗಿದೆ.
ವ್ಯಾಟಿಕನ್ನ ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ ಇಂದು ನಡೆದ ವಿಶೇಷ ಸಾಮೂಹಿಕ ಪ್ರಾರ್ಥನಾ ಅಧಿವೇಶನದಲ್ಲಿ ಪೋಪ್ ಫ್ರಾನ್ಸಿಸ್ ಅವರು ಭಾರತದ ಈ ಇಬ್ಬರು ಪಾದ್ರಿಗಳನ್ನು ಸೇರಿದಂತೆ ಜಗತ್ತಿನ ಒಟ್ಟು 6 ಪಾದ್ರಿಗಳಿಗೆ ಸಂತ ಪದವಿಯನ್ನು ಪ್ರದಾನ ಮಾಡಿದ್ದಾರೆ.
ಕೇರಳದ ಚರ್ಚ್ಗಳ ನಿಯೋಗದೊಂದಿಗೆ ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್ ಸಹ ಈ ವಿಶೇಷ ಮತ್ತು ದೇಶದ ಮಟ್ಟಿಗೆ ಸಂಭ್ರಮ ತಂದ ಈ ಕ್ಷಣಕ್ಕೆ ಸಾಕ್ಷಿಯಾದರು.