Webdunia - Bharat's app for daily news and videos

Install App

ಕಪ್ಪೆ ಸತ್ತಿದ್ದಕ್ಕೆ ಇನ್ವೆಸ್ಟಿಗೇಷನ್

Webdunia
ಗುರುವಾರ, 20 ಅಕ್ಟೋಬರ್ 2016 (18:13 IST)
ಪೆರು: ಇಲ್ಲಿನ ಕೋಟಾ ನದಿಯಲ್ಲಿ 10 ಸಾವಿರಕ್ಕೂ ಅಧಿಕ ಕಪ್ಪೆಗಳು ಮೃತಪಟ್ಟಿವೆ.  ಮಾಲಿನ್ಯದಿಂದ ಈ ಜಲಚರ ಸತ್ತಿವೆಯಾ, ಅಥವಾ ವಿಷಪೂರಿತ ಆಹಾರ ಸೇವನೆಯಿಂದ ಸತ್ತಿವೆಯಾ ಎಂದು ಪತ್ತೆ ಮಾಡಲು ಎನ್ವಿರಾನ್ಮೆಂಟಲ್ ಏಜೆನ್ಸಿ ತನಿಖೆ ಆರಂಭಿಸಿದೆ.
ಕಪ್ಪೆಗಳ ಮಾರಣ ಹೋಮ ಕಂಡು ಸ್ಥಳಿಯರು ಈ ಬಗ್ಗೆ ಹಲವು ಕ್ಯಾಂಪೇನ್ ಮಾಡುವ ಮೂಲಕ ಏಜೆನ್ಸಿಗೆ ಮನವಿ ಮಾಡಿದ್ದರು. ಅಲ್ಲದೇ ಜಲಮಾಲಿನ್ಯದಿಂದಲೇ ಕಪ್ಪೆಗಳು ಸತ್ತಿವೆ ಅಂತಾ ಆರೋಪಿಸಿ ತನಿಖೆಗೆ ಆಗ್ರಹಿಸಿದ್ರು.

 
ಇದಕ್ಕೆ ಸಂಬಂಧಪಟ್ಟಂತೆ ನದಿಗೆ ಯಾವುದೋ ಮಲಿನ ಸೇರುತ್ತಿದೆ. ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗುವಂತೆ ಕೆಲ ಸಂಘಟನೆಗಳು ಸತ್ತ 100ಕ್ಕೂ ಅಧಿಕ ಕಪ್ಪೆಗಳನ್ನು ಹಿಡಿದು ಪೆರು ರಾಜಧಾನಿ ಪುನೋನ ಆಡಳಿತ ಭವನದೆದುರು ಪ್ರತಿಭಟನೆ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದರು. 
 
ಈ ಬಗ್ಗೆ ಚರ್ಚೆ ನಡೆದು ಕೊನೆಗೂ ರಾಷ್ಟ್ರೀಯ ಅರಣ್ಯ ಪ್ರಾಣಿ ರಕ್ಷಣಾ ಸಮಿತಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಕೋರಿದ್ದಾರೆ.
 
ಹೀಗೆ ತನಿಖೆ ಮುಂದುವರೆದಾಗ 50 ಕಿಮಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಕಪ್ಪೆಗಳು ಸತ್ತಿರುವುದು ಪತ್ತೆಯಾಗಿದೆ. ಕೋಟಾ ನದಿಗೆ ಟಿಟಿಕಾಕಾ ನದಿ ನೀರು ಹರಿಬಿಟ್ಟಾಗ ಈ ರೀತಿಯ ದುರ್ಘಟನೆ ಸಂಭವಿಸಿದೆ. ಜೊತೆಗೆ ನೀರಿನ ಮಟ್ಟ ಹೆಚ್ಚಾದಾಗ, ಕಪ್ಪೆಗಳಿಗೆ ಆಮ್ಲಜನಕದ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಸಾವನ್ನಪ್ಪಿವೆ ಎಂದು ತಜ್ಞರ ತಂಡ ವರದಿ ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments