Webdunia - Bharat's app for daily news and videos

Install App

ಟೊರಂಟೊದಲ್ಲಿ ನಿಗೂಢ ರೀತಿಯಲ್ಲಿ ಸುದೇಶ್ ಶೆಟ್ಟಿ ಸಾವು

Webdunia
ಬುಧವಾರ, 20 ಏಪ್ರಿಲ್ 2016 (21:25 IST)
ಕರ್ನಾಟಕ ಮೂಲದ ಯುವಕ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ನಾಲ್ಕೈದು ದಿನಗಳ ಹಿಂದೆ ಸುದೇಶ್ ಶೆಟ್ಟಿ ಎಂಬವ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಐದು ವರ್ಷಗಳಿಂದ ಕೆನಡಾದಲ್ಲಿ ವಾಸವಿದ್ದ ಸುದೇಶ್ ಅಡುಗೆ ತರಬೇತಿ ಕೋರ್ಸ್ ಜತೆ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ.

ಆದರೆ ಸುದೇಶ್ ಹೇಗೆ ಸತ್ತಿದ್ದೆನ್ನುವುದು ಇನ್ನೂ ನಿಗೂಢವಾಗಿದೆ. ಉಡುಪಿಯ ಬಡಕುಟುಂಬಕ್ಕೆ ಸೇರಿದ ಸುದೇಶ್ ಶೆಟ್ಟಿ ಶವವನ್ನು ಕೂಡ ಭಾರತಕ್ಕೆ ತರಲು ಕಷ್ಟವಾಗಿತ್ತು. ಅನಾಥ ಶವವೆಂದು ಪರಿಗಣಿಸಿ ಅವನ ಶವವನ್ನು ಅಲ್ಲೇ ಶವಸಂಸ್ಕಾರ ಮಾಡಲು ಕೆನಡಾದಲ್ಲಿ ನಿರ್ಧರಿಸಲಾಗಿತ್ತು. 

 ಈ ಸಂಬಂಧ ಸುದೇಶ್ ಶೆಟ್ಟಿ ಪರವಾಗಿ ಟೊರಂಟೊದಲ್ಲಿ ನಡೆದ 2 ದಿನಗಳ ಕಾಲ ಸಾಮಾಜಿಕ ಜಾಲ ತಾಣದ  ಕ್ಯಾಂಪೇನ್‌ನಲ್ಲಿ ಕೇವಲ 2 ದಿನಗಳಲ್ಲಿ 30 ಸಾವಿರ ಡಾಲರ್ ಸಂಗ್ರಹಿಸಿ ಸುದೇಶ್ ಕುಟುಂಬಕ್ಕೆ ನೆರವು ನೀಡಲಾಗಿದೆ. 

ಇನ್ನೆರಡು ದಿನಗಳಲ್ಲಿ ಸುದೇಶ್ ಶೆಟ್ಟಿ ಶವವನ್ನು ಭಾರತಕ್ಕೆ ತರಲಾಗುತ್ತಿದೆ. ಸುದೇಶ್ ಶೆಟ್ಟಿ ಪರವಾಗಿ ಟೊರಾಂಟೊದಲ್ಲಿ ಸುದೇಶ್ ಕುಟುಂಬಕ್ಕೆ ಸಹಾಯ ಮಾಡಲು ಅವರ ರೂಂಮೇಟ್ ಅಲ್ವಿನ್ ಲೂಯಿಸ್ ಪ್ರಯತ್ನದಿಂದ ಇವೆಲ್ಲವೂ ಸಾಧ್ಯವಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments