Webdunia - Bharat's app for daily news and videos

Install App

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ

Webdunia
ಶನಿವಾರ, 29 ಜುಲೈ 2017 (20:23 IST)
ಸಾಮಾಜಿಕ ಜಾಲತಾಣಗಳಿಗೆ ನಿಮ್ಮ .ಫೋಟೋಗಳನ್ನ ಹಾಕುವ ಮುನ್ನ ಎಚ್ಚರ. ಸೈಬರ್ ಸುಲಿಗೆಕೋರರು ನಿಮ್ಮ ಫೋಟೋ ಬಳಸಿಕೊಂಡು ಪೋರ್ನ್ ಸೈಟ್`ಗಳಿಗೆ ಹಾಕಿ ಅವಾಂತರ ಸೃಷ್ಟಿಸಿ ಹಣ ಕೀಳಬಹುದು.
 

ಹೌದು, ಇಂತಹ ಪ್ರಕರಣಗಳು ಇತ್ತೀಚೆಗೆ ಭಾರತದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ಸ್`ಸ್ಟಾಗ್ರಾಮ್`ಗಳಿಂದ ಫೋಟೊ ಕದ್ದು ಪೋರ್ನ್ ಸೈಟ್`ಗಳಿಗೆ ಹಾಕುವ ದುಷ್ಕರ್ಮಿಗಳು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ನಿಮ್ಮ ಗೆಳೆಯರಿಗೆ ಬೆತ್ತಲೆ ಸೈಟ್`ಗೆ ಲಿಂಕ್ ಕೊಟ್ಟುಅ ಮಾರ್ಫ್ ಮಾಡಿದ ಬೆತ್ತಲೆ ಫೋಟೋವನ್ನ ಅವರ ಮುಂದೆ ಪ್ರದರ್ಶಿಸುತ್ತಾರೆ. ಬಳಿಕ ನಿಮ್ಮನನ ಸಂಪರ್ಕಿಸುವ ದುಷ್ಕರ್ಮಿಗಳು ಮಾರ್ಫಿಂಗ್ ಫೋಟೊ ತೆಗೆಯಲು ಹಣ ಡಿಮ್ಯಾಂಡ್ ಮಾಡುತ್ತಾರೆ.

ನವದೆಹಲಿಯ ಮಯೂರ್ ವಿಹಾರ್ ಮಹಿಳೆಯೊಬ್ಬರಿಗೆ ಇದೇ ರೀತಿ ಬ್ಲಾಕ್ ಮೇಲ್ ಮಾಡಿರುವ ಸೈಬರ್ ಚೋರರು 20000 ರೂ. ಹಣ ಪಡೆದು ಫೋಟೋವನ್ನೂ ಡಿಲೀಟ್ ಮಾಡದೇ ವಂಚನೆ ಮಾಡಿದ್ದಾರೆ. ಮಹಿಳೆಯ ಫೇಸ್ಬುಕ್ ಅಕೌಂಟ್`ನಿಂದ ಪ್ರೊಫೈಲ್ ಫೋಟೋ ತೆಗೆದು, ಪೋರ್ನ್ ಸೈಟ್`ಗೆ ಹಾಕಿ ಹಣ ಪೀಕಿದ್ದರು. ದಕ್ಷಿಣ ದೆಹಲಿಯ ವಿದ್ಯಾರ್ಥಿಯೊಬ್ಬರ ಫೋಟೋ ಸಹ ಇದೇ ರೀತಿ ಸೈಬರ್ ಚೋರರಿಗೆ ಆಹಾರವಾಗಿದ್ದವು. ಪೋರ್ನ್ ವಿಡಿಯೋವೊಂದು ವಿದ್ಯಾರ್ಥಿನಿಯ ಫೋಟೋ ಹಾಕಲಾಗಿತ್ತು. ನೋಯ್ಡಾ ಮಹಿಳೆಯೂ ಸಹ ಸೈಬರ್ ಚೋರರ ಹೀನ ಕೃತ್ಯಕ್ಕೆ ತುತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು: ಆರ್‌ ಅಶೋಕ್ ವ್ಯಂಗ್ಯ

ಮರಾಠಿ vs ಹಿಂದೆ ಭಾಷೆ ವಿವಾದ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು: ಕಂಗನಾ ರನೌತ್‌

ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಬೇಕು: ರಂಭಾಪುರಿ ಸ್ವಾಮೀಜಿ

ಸದ್ಯದಲ್ಲೇ ಸಿದ್ದರಾಮಯ್ಯ ದೆಹಲಿಗೆ ವರ್ಗಾವಣೆ ಪಕ್ಕಾ: ಬಿವೈ ವಿಜಯೇಂದ್ರ

ಸಂದೇಶ್‌ಖಾಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ಗೆ ಶಾಕ್‌

ಮುಂದಿನ ಸುದ್ದಿ