Webdunia - Bharat's app for daily news and videos

Install App

ಈರುಳ್ಳಿ ಹಾಕಿದ ಊಟ ನೀಡಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?!

Webdunia
ಗುರುವಾರ, 15 ಜೂನ್ 2017 (13:41 IST)
ನ್ಯೂಯಾರ್ಕ್: ಊಟ ಮಾಡಲೆಂದು ಬಂದ ಆ ವ್ಯಕ್ತಿ ಮುಂದೆ ತಟ್ಟೆ ಇಡುತ್ತಿದ್ದಂತೇ ದಿಗ್ಗನೆ ಎದ್ದು ಕೂತ. ರೆಸ್ಟೋರೆಂಟ್ ನ ಆ ಮೂಲೆಯಿಂದ ಈ ಮೂಲೆಗೆ ಎಲ್ಲರನ್ನೂ ಸುಟ್ಟು ಬಿಡುತ್ತೇನೆಂದು ಹೂಂಕರಿಸುತ್ತಾ ಬೆತ್ತಲೆ ಓಡಾಡಿದ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ?!

 
ಸಾಮಾನ್ಯವಾಗಿ ಹಸಿವಾಯಿತೆಂದು ಎಲ್ಲರೂ ರೆಸ್ಟೋರೆಂಟ್ ಗೆ ಬರುತ್ತಾರೆ. ತಮಗೆ ಬೇಕಾದ್ದನ್ನು ಆರ್ಡರ್ ಮಾಡಿ ಬೇಕಾದ ತಿಂಡಿ ತಿಂದು ಎದ್ದು ಹೋಗುತ್ತಾರೆ. ಒಂದು ವೇಳೆ ತಮಗೆ ಇಷ್ಟವಿಲ್ಲದ್ದು ತಂದು ಎದುರಿಟ್ಟರೆ, ಹೆಚ್ಚೆಂದರೆ ಹೋಟೆಲ್ ಮ್ಯಾನೇಜರ್ ಕರೆದು ಗದರಬಹುದು.

ಆದರೆ ಅಮೆರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಊಟದಲ್ಲಿ ಈರುಳ್ಳಿ ಹಾಕಿದ ಆಹಾರವಿತ್ತೆಂದರೆಂದು ಮರುದಿನ ರೆಸ್ಟೋರೆಂಟ್ ಗೆ ನುಗ್ಗಿ ಪ್ಯಾಂಟ್ ಬಿಚ್ಚಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಲ್ಲದೆ, ದಾಂದಲೆ ಎಬ್ಬಿಸಿದ್ದಾನೆ. ಈ ತಪ್ಪಿಗೆ ಆತನೀಗ ಕಂಬಿ ಎಣಿಸುತ್ತಿದ್ದಾನೆ!

ಯುಬಾ ರಾಜ್ ಶರ್ಮಾ ಎಂಬ 43 ವರ್ಷದ ವ್ಯಕ್ತಿ  ಈ ಅವಾಂತರ ಮಾಡಿದವರು. ಹೀಗೆಲ್ಲಾ ಅವಾಂತರ ಸೃಷ್ಟಿಸುವಾಗ ಆತ ಪಾನಮತ್ತನಾಗಿದ್ದ ಎಂದು ರೆಸ್ಟೋರೆಂಟ್ ಮಾಲಿಕ, ಭಾರತೀಯ ಮೂಲದ ರವೀಂದರ್ ಸಿಂಗ್ ಆರೋಪಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments