ಭಾರತಕ್ಕೆ ಬರಲಿರುವ ವ್ಲಾಡಿಮಿರ್ ಪುಟಿನ್ ಮಲ, ಮೂತ್ರವೂ ರಷ್ಯಾಗೆ ವಾಪಸ್: ಕಾರಣವೇನು ಗೊತ್ತಾ

Krishnaveni K
ಗುರುವಾರ, 4 ಡಿಸೆಂಬರ್ 2025 (10:53 IST)
ನವದೆಹಲಿ: ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡುತ್ತಿದ್ದಾರೆ. ಪುಟಿನ್ ಭದ್ರತೆಗೆ ಐದು ಸ್ತರದ ಕ್ರಮ ಕೈಗೊಳ್ಳಲಾಗಿದೆ. ಎಷ್ಟರಮಟ್ಟಿಗೆ ಎಂದರೆ ಪುಟಿನ್ ಮಲ, ಮೂತ್ರವೂ ರಷ್ಯಾಗೇ ವಾಪಸ್ ಆಗಲಿದೆ. ಇದಕ್ಕೆ ಕಾರಣವೇನು ಗೊತ್ತಾ?

ಪುಟಿನ್ ಗೆ ಎಂಥಾ ಭದ್ರತೆ ಒದಗಿಸಲಾಗಿದೆ ಎಂದರೆ ಅವರ ಬಳಿ ಒಂದು ಒಪ್ಪಿಗೆಯಿಲ್ಲದೇ ಒಂದು ಸೊಳ್ಳೆಯೂ ಸುಳಿಯದು. ಭದ್ರತೆಗೆ 35 ವರ್ಷದೊಳಗಿನ ಸಿಬ್ಬಂದಿಗಳನ್ನೇ ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ 5.8 ರಿಂದ 6.2 ಅಡಿ ಎತ್ತರದವರೇ ಆಗಿರಬೇಕು. ಪುಟಿನ್ ಸಂಚಿರಿಸುವ ಕಾರು ಪಂಕ್ಚರ್ ಆದರೂ ಸಲೀಸಾಗಿಯೇ ಚಲಿಸಬಲ್ಲದು.

ಶಸ್ತ್ರಸಜ್ಜಿತ ಐಷಾರಾಮಿ ಕಾರು ಔರಸ್ ಸೆನಾಟ್ ಮಾಸ್ಕೋದಿಂದಲೇ ತರಿಸಲಾಗುತ್ತಿದೆ. ಸುಸಜ್ಜಿತ ಕ್ಯಾಮರಾಗಳು, ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆ ಸಿಬ್ಬಂದಿ ಜೊತೆಗೆ ಭಾರತದ ಎನ್ ಎಸ್ ಜಿ ಕಮಾಂಡೋಗಳೂ ಭದ್ರತೆ ಒದಗಿಸಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪುಟಿನ್ ಮಲ, ಮೂತ್ರವನ್ನೂ ರಷ್ಯಾಗೆ ವಾಪಸ್ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಮಲ, ಮೂತ್ರ ಸಂಗ್ರಹಿಸಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬಹುದು ಎಂಬುದು ರಷ್ಯಾ ಆತಂಕ. ಇದಕ್ಕಾಗಿ ಮಲ,ಮೂತ್ರ ಸಂಗ್ರಹಿಸಲು ಪೂಪ್ ಸೂಟ್ ಕೇಸ್ ಗಳನ್ನೂ ಭಾರತಕ್ಕೆ ತರಲಾಗಿದೆ. ಜೊತೆಗೆ ಅವರಿಗೆ ನೀಡಲಾಗುವ ಆಹಾರವನ್ನೂ ಲ್ಯಾಬ್ ನಲ್ಲಿ ಪರೀಕ್ಷಿಸಿ ಬಳಿಕ ನೀಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುರ್ಚಿ ಕದನದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಇಲ್ಲಿದೆ ಹವಾಮಾನ ವರದಿ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments