Webdunia - Bharat's app for daily news and videos

Install App

ರಕ್ತ ಚಂದಿರನಾಗಲಿದ್ದಾನೆ ಹುಣ್ಣಿಮೆ ಚಂದಿರ

Webdunia
ಭಾನುವಾರ, 27 ಸೆಪ್ಟಂಬರ್ 2015 (14:54 IST)
ಭಾನುವಾರ ಹಾಗೂ ಸೋಮವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಹುಣ್ಣಿವೆ ಚಂದಿರ ರಕ್ತ ಚಂದಿರನಾಗಿ ಗೋಚರಿಸಲಿದ್ದಾನೆ. ವಿಶ್ವದ ಕೆಲ ಭಾಗಗಳಲ್ಲಿ ಸೆಪ್ಟೆಂಬರ್ 27ಕ್ಕೆ ಗ್ರಹಣ ನಡೆದರೆ ಹಲವೆಡೆ ಸೆಪ್ಟೆಂಬರ್ 28ಕ್ಕೆ ಕಂಡುಬರಲಿದೆ. 1982ರ ಬಳಿಕ ಮತ್ತೆ ಕಾಣಿಸಿಕೊಳ್ಳಲಿರುವ ಕೆಂಪು ಚಂದ್ರ ಕೌತುಕತೆಗೆ ಕಾರಣನಾಗಿದ್ದಾನೆ. 
ಬ್ಲಡ್ ಮೂನ್ ಎಂದೇ ಪರಿಗಣಿಸಲ್ಪಟ್ಟಿರುವ ಈ ಗ್ರಹಣ ಇಂದು ಮಧ್ಯರಾತ್ರಿ ನಡೆಯಲಿದೆ. ಚಂದ್ರ ಇಂದು ಭೂಮಿಯ ಸಮೀಪಕ್ಕೆ ಬರಲಿದ್ದು, ಗ್ರಹಣದ ಸಂದರ್ಭದಲ್ಲಿ ಎಂದಿಗಿಂತ ದೊಡ್ಡದಾಗಿ ಹಾಗೂ ಕೆಂಪಗಾಗಿ ಗೋಚರಿಸಲಿದ್ದಾನೆ. ವಾಸ್ತವವಾಗಿ ಚಂದ್ರನ ಆಕಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾದ ವಿಜ್ಞಾನಿ ನೋವಾಹ್ ಪೆಟ್ರೊ ಸ್ಪಷ್ಟ ಪಡಿಸಿದ್ದಾರೆ. 
 
ಈ ಅಪರೂಪದ ‘ ಚಂದ್ರಗ್ರಹಣ’ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಹಿಂದೆ 1982ರಲ್ಲಿ ಕಾಣಿಸಿಕೊಂಡಿದ್ದ ಕೆಂಪು ಚಂದಿರ ಮತ್ತೆ 2033ರವರೆಗೆ ಕಾಣಿಸಲಾರ. ಅಲ್ಲದೆ, ಈ ಗ್ರಹಣದ ಪರಿಣಾಮವಾಗಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿ ಸಾವು-ನೋವು ಉಂಟಾಗುವ ಸಾಧ್ಯತೆಯಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಅಪಾಯವಿದೆ ಎಂದೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
 
ಈ ನೆತ್ತರ ಚಂದಿರನನ್ನು ಬರಿಗಣ್ಣಿನಲ್ಲೂ ನೋಡಬಹುದು ಎಂದು ನಾಸಾ ಸ್ಪಷ್ಟಪಡಿಸಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments