Webdunia - Bharat's app for daily news and videos

Install App

ಸಿರಿಯಾ ಪರಿಹಾರಕ್ಕೆ ಸೌದಿ ರಾಜಕುಮಾರನನ್ನು ಭೇಟಿ ಮಾಡಿದ ಪುಟನ್

Webdunia
ಸೋಮವಾರ, 12 ಅಕ್ಟೋಬರ್ 2015 (14:31 IST)
ಸಿರಿಯಾದಲ್ಲಿ ರಾಜಕೀಯ ಸಮಸ್ಯೆ ಪರಿಹಾರದ ಸಾಧ್ಯತೆ ಕುರಿತು ಚರ್ಚಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೌದಿ ರಕ್ಷಣಾ ಸಚಿವ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಸೋಮವಾರ ಭೇಟಿ ಮಾಡಿದರು. ಉಭಯತ್ರರು ದಕ್ಷಿಣ ರಷ್ಯಾ ನಗರ ಸೊಚಿಯಲ್ಲಿ ಭೇಟಿ ಮಾಡಿ ವಿದೇಶಾಂಗ ಸಚಿವ ಸರ್ಗೈ ಲಾರ್ವೋವ್ ಮತ್ತು ಇಂಧನ ಸಚಿವ ಅಲೆಕ್ಸಾಂಡರ್ ನೋವಾಕ್ ಅವರನ್ನು ಜತೆಗೂಡಿದ್ದರು.
 
ಸೌದಿ ಮತ್ತು ರಷ್ಯಾ ಸಿರಿಯಾಗೆ ಸಂಬಂಧಿಸಿದಂತೆ ಒಂದೇ ಉದ್ದೇಶ ಹೊಂದಿರುವುದಾಗಿ ಉಭಯತ್ರರು ದೃಢಪಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶವನ್ನು ಭಯೋತ್ಪಾದಕ ಕಲೀಫೇಟ್ ಆಕ್ರಮಿಸಿಕೊಳ್ಳಲು ಬಿಡಬಾರದೆಂದು ತೀರ್ಮಾನಿಸಿವೆ.
 
ರಷ್ಯಾ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ನಡೆಸಿರುವ ಬಗ್ಗೆ ಮತ್ತು ಇರಾನ್‌ ಜತೆ ಮೈತ್ರಿ ಕುರಿತು ರಿಯಾದ್ ಚಿಂತಿತವಾಗಿದೆ ಎಂದು ಮಹಮ್ಮದ್ ಬಿನ್ ಸಲ್ಮಾನ್ ತಿಳಿಸಿದರು. ಸಿರಿಯಾದಲ್ಲಿ ರಾಜಕೀಯ ಪರಿಹಾರಕ್ಕೆ ಸೌದಿ ಅರೇಬಿಯಾ ಒಲವು ತೋರಿಸಿದೆ. ಆದರೆ ಮಾಸ್ಕೊ ಜತೆ ಕಟ್ಟಾ ಮೈತ್ರಿ ಹೊಂದಿರುವ ಅಧ್ಯಕ್ಷ ಬಷರ್ ಅಲ್ ಅಸಾದ್ ನಿರ್ಗಮನ ಕೂಡ ಅದರಲ್ಲಿ ಸೇರಿದೆ. 
 
 ಏತನ್ಮಧ್ಯೆ ಸಿರಿಯಾದ ಮೇಲೆ ಬಾಂಬ್ ದಾಳಿ ಅಭಿಯಾನಕ್ಕೆ ಮಾಸ್ಕೊ ಕಾರ್ಯಪ್ರವೃತ್ತವಾಗಿರುವುದು ಅಮೆರಿಕ ನೇತೃತ್ವದ ಸಮ್ಮಿಶ್ರ ಕೂಟವನ್ನು ಮಬ್ಬಾಗಿಸಿದ್ದು, ಅಮೆರಿಕ ಮತ್ತು ಮಿತ್ರಕೂಟಕ್ಕೆ ಕೋಪ ತರಿಸಿದೆ. ರಷ್ಯಾದ ಕಾರ್ಯಾಚರಣೆ ಉದ್ದೇಶವು ಕಾನೂನುಬದ್ಧ ಅಧಿಕಾರ ಸ್ಥಿರಗೊಳಿಸಿ ರಾಜಕೀಯ ಪರಿಹಾರಕ್ಕೆ ಪರಿಸ್ಥಿತಿ ಸೃಷ್ಟಿಸುವುದು ಎಂದು ಪುಟಿನ್ ಈ ಸಂದರ್ಭದಲ್ಲಿ ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments