Webdunia - Bharat's app for daily news and videos

Install App

ಪೋಲೆಂಡ್ ನಲ್ಲಿ ವಿಶೇಷ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ನೋಡಲು ಜನರ ದಂಡು: ಏನಿದರ ವಿಶೇಷತೆ

Krishnaveni K
ಗುರುವಾರ, 22 ಆಗಸ್ಟ್ 2024 (10:35 IST)
Photo Credit: Narendra
ಪೋಲೆಂಡ್ : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪೋಲೆಂಡ್ ನ ವಿಶೇಷ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರನ್ನು ನೋಡಲು ಜನರ ದಂಡೇ ಇತ್ತು. ಪ್ರಧಾನಿ ಭೇಟಿ ನೀಡಿರುವ ಸ್ಥಳದ ವಿಶೇಷತೆ ಏನು ಎಂದು ಇಲ್ಲಿ ನೋಡಿ.
 
ಎರಡು ದಿನಗಳ ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಲ್ಲಿನ ಮಹಾರಾಜ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ  ವೇಳೆ ಸಾಕಷ್ಟು ಜನ ಅಲ್ಲಿ ಭಾರತೀಯ ಪ್ರಧಾನಿಯನ್ನು ನೋಡಲು ನೆರೆದಿದ್ದರು. ಬಹುತೇಕ ಅಲ್ಲಿ ನೆಲೆಸಿರುವ ಭಾರತೀಯರೇ ಭಾರತದ ಧ್ವಜ ಹಿಡಿದುಕೊಂಡು ಮೋದಿಗೆ ಸ್ವಾಗತ ಕೋರಿದ್ದಾರೆ.

ಜಾಮ್ ಸಾಹೇಬ್ ಸಾವಿರಾರು ಅನಾಥ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಸಲಹಿದ್ದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಣ ಭೀತಿಯಲ್ಲಿದ್ದ, ಅನಾಥರಾಗಿದ್ದ ಅನೇಕ ಯಹೂದಿ ಮಕ್ಕಳನ್ನು ಪೋಲೆಂಡ್ ನಿಂದ ಭಾರತಕ್ಕೆ ಕಳುಹಿಸಿಕೊಡುವ ಮೂಲಕ ಸಾವಿರಾರು ಮಕ್ಕಳ ಪ್ರಾಣ ಕಾಪಾಡಿದ್ದರು. ಅಲ್ಲದೆ, ಅವರನ್ನು ಸ್ವಂತ ಮಕ್ಕಳಂತೆ ಸಲಹಿದ್ದರು.

ಪೋಲೆಂಡ್ ಗೆ ಕಾಲಿಟ್ಟ ಬೆನ್ನಲ್ಲೇ ಅವರು ನವನಗರದ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ಸ್ಮಾರಕಕ್ಕೂ ಗುಜರಾತ್ ಗೂ ವಿಶೇಷ ನಂಟಿದೆ. ವಾರ್ಸಾದ ನವನಗರದಲ್ಲಿ ನಿರ್ಮಿಸಲಾಗಿರುವ ಜಾಮ್ ಸಾಹೇಬ್ ಸ್ಮಾರಕವನ್ನು ಗುಜರಾತ್ ನ ನವನಗರದ ಮಾಜಿ ಮಹಾರಾಜ ಜಾಮ್ ಸಾಹೇಬ ದಿಗ್ವಿಜಯ್ ಸಿನ್ಹಜಿ ಅವರಗೆ ಸಮರ್ಪಿಸಲಾಗಿದೆ. ಅವರ ಗೌರವಾರ್ಥ ಈ ಸ್ಮಾರಕಕ್ಕೆ ಜಾಮ್ ಸಾಹೇಬ್ ಸ್ಮಾರಕ ಎಂದು ಹೆಸರಿಡಲಾಗಿದೆ.

80 ವರ್ಷಗಳ ಹಿಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅನಾಥರಾದ ಸಾವಿರಾರು ಯಹೂದಿ ಮಕ್ಕಳನ್ನು ಜಾಮ್ ಸಾಹೇಬ್ ಸೈಬೀರಿಯಾದಿಂದ ಭಾರತಕ್ಕೆ ಕರೆತಂದರು. ಅವರನ್ನು ತಮ್ಮ ಅರಮನೆಯಲ್ಲೇ ಸಲಹಿದರು. ಈ ಮಕ್ಕಳನ್ನು ಬಳಿಕ  ಪೋಲೆಂಡ್ ನಿಂದ ಸೋವಿಯತ್ ಒಕ್ಕೂಟವು ಸೈಬೀರಿಯಾದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿತು. ಆಗಲೂ ಮಹಾರಾಜ ಮಕ್ಕಳನ್ನು ಭೇಟಿಯಾಗಲು ಹೋಗುತ್ತಿದ್ದರು. ಜಾಮ್ ಸಾಹೇಬ ಎಂದರೆ ವಾರ್ಸಾ ಜನರಿಗೆ ಈಗಲೂ ಅಷ್ಟೇ ಗೌರವವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

94 ವರ್ಷಗಳ ಇತಿಹಾಸದಲ್ಲಿ ಜೂನ್‌ ತಿಂಗಳಲ್ಲೇ ಮೊದಲ ಭಾರೀ ಭರ್ತಿಯಾದ ಕೆಆರ್‌ಎಸ್‌, ಬಾಗಿನ ಅರ್ಪಣೆ

ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ: ಫುಲ್ ಟ್ರೋಲ್

ವಿಜಯೇಂದ್ರಗೆ 10 ನಿಮಿಷ ಅಮಿತ್ ಶಾ ಬೈದಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ: ಆರೋಪ ತಳ್ಳಿಹಾಕಿದ ಆಡಳಿತ ಅಧಿಕಾರಿ

70 ಲಕ್ಷ ಕಾರು, ಚಿನ್ನ ಕೊಟ್ಟರೂ ಗಂಡನ ಮನೆಯವರ ಕಾಟ ತಪ್ಪಲಿಲ್ಲ: ನವವಿವಾಹಿತೆ ಆತ್ಮಹತ್ಯೆ

ಮುಂದಿನ ಸುದ್ದಿ
Show comments