Webdunia - Bharat's app for daily news and videos

Install App

ಪಾಕ್ ಸೈನಿಕ ಶಾಲೆಯ ಮೇಲಿನ ದಾಳಿಗೆ ಭಾರತವೇ ಕಾರಣ!

Webdunia
ಗುರುವಾರ, 18 ಡಿಸೆಂಬರ್ 2014 (09:19 IST)
ಪಾಕಿಸ್ತಾನದ ಸೈನಿಕ ಶಾಲೆಯಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯವನ್ನು ಮೊದಲು ಖಂಡಿಸಿದ್ದು ಭಾರತವೇ. ಭಾರತ ಈ ಮಟ್ಟದ  ಬೆಂಬಲಕ್ಕೆ ಪಾಕ್ ನಾಯಕರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಉಗ್ರರ ಮಾರಣಹೋಮಕ್ಕೆ ಭಾರತವೇ ಕಾರಣ ಎಂಬ ಹಾಸ್ಯಾಸ್ಪದ ಆರೋಪ ಕೂಡ ಕೇಳಿ ಬಂದಿದೆ. ಭಾರತದ ವಿರುದ್ಧ ಈ ಗಂಭೀರ ಅಪವಾದ ಹೊರಿಸಿರುವುದು ಬೇರೆ ಯಾರೂ ಅಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮುಂಬೈ ದಾಳಿಯ ಸಂಚುಕೋರ, ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್. 
ಪಾಕಿಸ್ತಾನದ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಜಮಾತ್-ಉದ್-ದವಾ (ಜೆಯುಡಿ) ನಾಯಕ ಸಯೀದ್ "ಪೇಶಾವರದ ಶಾಲೆಯ ಮೇಲಿನ ಭಯೋತ್ಪಾದಕ ಕೃತ್ಯಕ್ಕೆ ಭಾರತವೇ ಕುಮ್ಮಕ್ಕು ನೀಡಿದೆ , ಇದಕ್ಕೆ ಪ್ರತೀಕಾರ ತೀರಿಸಿಕೊಂಡೇ ತೀರುತ್ತೇವೆ" ಎಂದು ಬೆದರಿಕೆ ಹಾಕಿದ್ದಾನೆ. 
 
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್   ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಗುಪ್ತಚರ ಇಲಾಖೆ 'ರಾ' ಈ ದುಷ್ಕೃತ್ಯಕ್ಕೆ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ. ದಾಳಿಯ ಉಸ್ತುವಾರಿ ವಹಿಸಿದ್ದ ಅಪಘಾನಿಸ್ತಾನಿ ಕಮಾಂಡರ್‌ ಫಜ್ಲುಲ್ಲಾಗೆ ತರಬೇತಿ ನೀಡಿರುವುದು ಭಾರತ. ಅಪಘಾನಿಸ್ತಾನ ಮತ್ತು ಭಾರತದ 'ರಾ'ದ ಜಂಟಿ ಸಹಯೋಗದೊಂದಿಗೆ  ದಾಳಿ ನಡೆದಿದೆ ಎಂದು ಮುಷರಫ್ ಆರೋಪಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments