Webdunia - Bharat's app for daily news and videos

Install App

ಸಿಹಿ ತಿಂಡಿಯಲ್ಲಿ ವಿಷ ಬೆರೆಸಿ 30 ಜನರನ್ನು ಕೊಂದ ಪಾಕ್ ಅಂಗಡಿ ಮಾಲೀಕ

Webdunia
ಶುಕ್ರವಾರ, 6 ಮೇ 2016 (19:48 IST)
ಪಾಕಿಸ್ತಾನದ ಸಿಹಿ ತಿನಿಸು ಅಂಗಡಿ ಮಾಲೀಕ ತನ್ನ ತಿಂಡಿಯಲ್ಲಿ ಕೀಟನಾಶಕ ಬೆರೆಸಿ 30ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ವಿಷವುಣಿಸಿದ ಆರೋಪಕ್ಕೆ ಗುರಿಯಾಗಿದ್ದಾನೆ. ತನ್ನ ಅಣ್ಣನ ಮೇಲೆ ಸೇಡುತೀರಿಸಿಕೊಳ್ಳುವುದಕ್ಕೆ ಅವನು ಇಂತಹ ದುಷ್ಕೃತ್ಯಕ್ಕೆ ಇಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕೇಂದ್ರ ಪಂಜಾಬ್ ಪ್ರಾಂತ್ಯದಲ್ಲಿನ ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಖಾಲಿದ್ ಮೆಹಮೂದ್ ಸಿಹಿ ತಿನಿಸಿನ ಅಂಗಡಿಯ ಪಾಲುದಾರನಾದ ತನ್ನ ಅಣ್ಣ ತಾರಿಖ್ ವ್ಯವಹಾರದ ವಿವಾದದಲ್ಲಿ ತನ್ನನ್ನು ಅವಮಾನ ಮಾಡಿ ನಿಂದಿಸಿದ್ದರಿಂದ ಅವನ ಮೇಲೆ ಸೇಡುತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ. 
 
ನನಗೆ ಕೋಪ ತಡೆಯಲಾಗದೇ ಬೇಯುತ್ತಿದ್ದ ಸಿಹಿತಿಂಡಿಯೊಳಗೆ ಕೀಟನಾಶಕವನ್ನು ಬೆರೆಸಿದೆ ಎಂದು ಅವನು ಹೇಳಿದ್ದಾನೆ.  ವಿಷಯುಕ್ತ ಸಿಹಿತಿಂಡಿಯನ್ನು ಸ್ಥಳೀಯ ವ್ಯಕ್ತಿ ಖರೀದಿಸಿ ತನ್ನ ಮೊಮ್ಮಗನ ಹುಟ್ಟುಹಬ್ಬ ಆಚರಿಸುತ್ತಿದ್ದ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ತಿನ್ನಿಸಿದ್ದರು. ಮಗುವಿನ ತಂದೆ, ಅವನ 6 ಮಂದಿ ಚಿಕ್ಕಪ್ಪಂದಿರು ಮತ್ತು ಒಬ್ಬರು ಚಿಕ್ಕಮ್ಮ ಮೃತಪಟ್ಟ 30 ಮಂದಿಯ ಪೈಕಿ ಸೇರಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಕೂಡ ಸೇರಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments