Webdunia - Bharat's app for daily news and videos

Install App

ಪಹಲ್ಗಾಮ್ ದಾಳಿ ನಡೆದು ಎರಡು ತಿಂಗಳಾಗಿಲ್ಲ ಆಗ್ಲೇ ಪಾಕಿಸ್ತಾನದ ಚಾನೆಲ್ ಗಳ ನಿಷೇಧ ವಾಪಸ್

Krishnaveni K
ಗುರುವಾರ, 3 ಜುಲೈ 2025 (10:33 IST)
ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿ ನಡೆದ ಬಳಿಕ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಸಮರ ಸಾರಿತ್ತು. ಅದರ ಭಾಗವಾಗಿ ಪಾಕಿಸ್ತಾನದ ಚಾನೆಲ್ ಗಳು, ಯೂ ಟ್ಯೂಬ್ ಚಾನೆಲ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು. ಆದರೆ ಈಗ ನಿಷೇಧ ವಾಪಸ್ ಪಡೆದಿದೆ.

ಭಾರತದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ಖಾತೆಗಳು, ಯೂ ಟ್ಯೂಬ್ ಚಾನೆಲ್ ಗಳು, ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಅದರಂತೆ ಪಾಕಿಸ್ತಾನಿಯರಿಗೆ ಭಾರತದಲ್ಲಿ ವೀಕ್ಷಕರು ಸಿಗದೇ ನಷ್ಟವಾಗಿತ್ತು.

ಆದರೆ ಈಗ ಆಪರೇಷನ್ ಸಿಂಧೂರ್ ನಡೆದು ತಿಂಗಳಾದ ಬೆನ್ನಲ್ಲೇ ಭಾರತ ಸದ್ದಿಲ್ಲದೇ ಯೂ ಟ್ಯೂಬ್ ವಾಹಿನಿಗಳು, ಸುದ್ದಿ ಸಂಸ್ಥೆಗಳ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡಿದೆ ಎನಿಸುತ್ತಿದೆ. ಯಾಕೆಂದರೆ ಈ ಎಲ್ಲಾ ಚಾನೆಲ್ ಗಳು ಈಗ ಭಾರತದಲ್ಲಿ ಮತ್ತೆ ಪ್ರಸಾರ ಕಾಣುತ್ತಿದೆ. ಆದರೆ ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ಖಾತೆಗಳು ಮಾತ್ರ ಈಗಲೂ ಬ್ಯಾನ್ ಆಗಿಯೇ ಇದೆ.

ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಅಮಾಯಕರ ಮೇಲೆ ಉಗ್ರರು ದಾಳಿ ನಡೆಸಿ 27 ಜನರ ಸಾವಿಗೆ ಕಾರಣವಾಗಿ ಎರಡು ತಿಂಗಳಾಗಿಲ್ಲ. ಆಗಲೇ ನಿಷೇಧ ವಾಪಸ್ ಮಾಡಿದ್ದು ಯಾಕೆ? ಇದಕ್ಕೆ ಒಪ್ಪಿಗೆ ಕೊಟ್ಟವರು ಯಾರು? ಹಾಗಿದ್ದರೆ ನಿಷೇಧ ಹೇರಿ ಏನು ಉಪಯೋಗವಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ.

ಶೊಯೇಬ್ ಅಖ್ತರ್ ಸೇರಿದಂತೆ ಖ್ಯಾತ ಕ್ರಿಕೆಟಿಗರ ಯೂ ಟ್ಯೂಬ್ ಚಾನೆಲ್ ಗಳೆಲ್ಲವೂ ಈಗ ಮರಳಿ ವೀಕ್ಷಣೆಗೆ ಲಭ್ಯವಿದೆ. ಇದನ್ನೀಗ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಷ್ಟು ಅಮಾಯಕರ ಜೀವಕ್ಕೆ ಬೆಲೆಯಿಲ್ಲದೇ ಹೋಯ್ತು ಎಂದು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದಿಂದ ಶೀಘ್ರದಲ್ಲೇ ಮಧ್ಯಮವರ್ಗದವರಿಗೆ ಗುಡ್ ನ್ಯೂಸ್: ಇವುಗಳ ಬೆಲೆ ಕಡಿತ

ಡಾ ಸಿ ಮಂಜುನಾಥ್ ಪ್ರಕಾರ ಇದೊಂದು ಲಕ್ಷಣವಿದ್ದರೆ ನಿರ್ಲ್ಯಕ್ಷ ಮಾಡಬಾರದು

ಹತ್ಯೆಗೀಡಾಗಿದ್ದ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾಳಿಂದ ನಂದಿನಿ ಪಾರ್ಲರ್ ನಲ್ಲಿ ದಾಂಧಲೆ

Karnataka Weather: ಇಂದು ಈ ಮೂರು ಜಿಲ್ಲೆಗೆ ಭಾರೀ ಮಳೆ ನಿರೀಕ್ಷೆ

ವಾಲ್ಮೀಕಿ ನಿಗಮದ ಹಗರಣ: ಬಳ್ಳಾರಿ ಸಂಸದ, ಶಾಸಕರ ರಾಜೀನಾಮೆಗೆ ಬಿ.ಶ್ರೀರಾಮುಲು ಆಗ್ರಹ

ಮುಂದಿನ ಸುದ್ದಿ
Show comments