ಬಡವರು ಹುಟ್ಟುವುದೇ ಶ್ರೀಮಂತರ ಸೇವೆ ಮಾಡಲು ಎಂದು ಪಾಕಿಸ್ತಾನದ ರಾಜಕಾರಣಿಯೊಬ್ಬರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಪಿಎಂಎಲ್ ನವಾಜ್ ಪಕ್ಷದ ಸಂಸದ ಸರ್ದಾರ್ ಮೊಹಮ್ಮದ್ ಯಾಕೂಬ್ ನಸಾರ್, ಸಂಸದರ ಸಭೆಯಲ್ಲಿ ಬಡವರು ಹುಟ್ಟುವುದೇ ಶ್ರೀಮಂತರ ಸೇವೆಗಾಗಿ ಎಂದು ಹೇಳಿಕೆ ನೀಡಿರುವುದನ್ನು ವಿಪಕ್ಷಗಳಉ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸದ ತಾಜ್ ಹೈದರ್, ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ, ಪ್ರಧಾನಮಂತ್ರಿ ನವಾಜ್ ಷರೀಫ್ ನೇತೃತ್ವದ ಸರಕಾರ ಶ್ರೀಮಂತರ ಪರವಾಗಿ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಬಡವರ ಪರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕೆಲವರನ್ನು ಬಡವರಾಗಿಸಿ ಮತ್ತು ಕೆಲವರನ್ನು ಶ್ರೀಮಂತರಾಗಿರಿಸಿದ್ದು ಆ ಸೃಷ್ಟಿಕರ್ತ ದೇವರು. ಆದ್ದರಿಂದ, ವ್ಯವಸ್ಥೆಯ ಬಗ್ಗೆ ಮಧ್ಯವಹಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಮತ್ತೊಬ್ಬ ಸಂಸದ ಮೊಹಮ್ಮದ್ ಉಸ್ಮಾನ್ ಖಾನ್ ಕಾಕರ್ ಮಾತನಾಡಿ, ದೇವರು ಪ್ರತಿಯೊಬ್ಬರನ್ನು ಸಮಾನವಾಗಿ ಸೃಷ್ಠಿಸಿದ್ದಾನೆ. ಬಡವರನ್ನು ಶ್ರೀಮಂತರ ಸೇವೆಗಾಗಿ ಹುಟ್ಟಿಸಿಲ್ಲ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ