Webdunia - Bharat's app for daily news and videos

Install App

ಚಾಬಹರ್ ಬಂದರಿನ ಒಪ್ಪಂದಕ್ಕೆ ಭಾರತ-ಇರಾನ್ ಅಂಕಿತ

Webdunia
ಸೋಮವಾರ, 23 ಮೇ 2016 (15:30 IST)
ಭಾರತ ಮತ್ತು ಇರಾನ್ ಸೋಮವಾರ ಚಾಬಹರ್ ಬಂದರನ್ನು ಇರಾನ್‌ನಲ್ಲಿ ಅಭಿವೃದ್ಧಿಮಾಡುವ ಐತಿಹಾಸಿಕ ಒಪ್ಪಂದ ಸೇರಿದಂತೆ 12 ಒಪ್ಪಂದಗಳಿಗೆ ಸಹಿಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಭೇಟಿ ಬಳಿಕ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.
 
 ಜಂಟಿ ಹೇಳಿಕೆಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಚಾಬಹರ್ ಬಂದರು  ಮತ್ತು ಸಂಬಂಧಿಸಿದ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಭಾರತದಿಂದ 500 ದಶಲಕ್ಷ ಡಾಲರ್ ಲಭ್ಯತೆಯ ಒಪ್ಪಂದವು ಮುಖ್ಯ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಇರಾನ್ ದೇಶಕ್ಕೆ ಭೇಟಿ ನೀಡುತ್ತಿರುವುದು ಮಹಾ ಸುಯೋಗವಾಗಿದೆ. ಭಾರತ ಮತ್ತು ಇರಾನ್ ಹೊಸ ಸ್ನೇಹಿತರಲ್ಲ. ಇತಿಹಾಸದಷ್ಟೇ ನಮ್ಮ ದೋಸ್ತಿಯೂ ಹಳೆಯದಾಗಿದೆ. ನಾವು ಪರಸ್ಪರರ ಬೆಳವಣಿಗೆ ಮತ್ತು ಸಂಪದಭಿವೃದ್ಧಿ ಹಿತಾಸಕ್ತಿಗಳನ್ನು ಸುಖ, ದುಃಖಗಳನ್ನು ಹಂಚಿಕೊಂಡಿದ್ದೇವೆ ಎಂದು ಮೋದಿ ಹೇಳಿದರು.
 
ಪ್ರಾದೇಶಿಕ ಸನ್ನಿವೇಶ ಮತ್ತು ಸಮಾನ ಕಾಳಜಿಯ ಜಾಗತಿಕ ವಿಷಯಗಳನ್ನು ಕುರಿತು ನಾವು ಅಭಿಪ್ರಾಯ ಹಂಚಿಕೊಂಡೆವು.  ನಮ್ಮ ನೆಲಗಳಲ್ಲಿ ಅಸ್ಥಿರತೆ, ಮೂಲಭೂತವಾದ ಮತ್ತು ಭಯೋತ್ಪಾದನೆಯ ಶಕ್ತಿ ಹರಡುತ್ತಿರುವ ಬಗ್ಗೆ ಕಳವಳ ಹಂಚಿಕೊಂಡೆವು ಎಂದು ಪ್ರಧಾನಿ ನುಡಿದರು.
 
 ಚಾಬಹರ್ ನೈರುತ್ಯ ಇರಾನ್‌ನಲ್ಲಿದ್ದು ಪಾಕಿಸ್ತಾನದ ಮೂಲಕ ಹಾದುಹೋಗದೇ ಆಫ್ಘಾನಿಸ್ತಾನಕ್ಕೆ ಮಾರ್ಗವನ್ನು ತೆರೆದಿಡುತ್ತದೆ. ಚಾಬಹರ್ ಬಂದರಿನಿಂದ ಇರಾನ್ ರಸ್ತೆ ಜಾಲವು ಆಫ್ಘಾನಿಸ್ತಾನದ ಜರಾಂಗ್‌ವರೆಗೆ 883 ಕಿಮೀ ದೂರ ಕೊಂಡಿ ಕಲ್ಪಿಸಿದೆ.
 ಈ ಬಂದರನ್ನು ಕಚ್ಚಾ ತೈಲ ಮತ್ತು ಯೂರಿಯಾದ ಸಾಗಣೆಗೆ ಬಳಸುವುದರಿಂದ ಭಾರತಕ್ಕೆ ಸಾಗಣೆ ವೆಚ್ಚವನ್ನು ತಗ್ಗಿಸುತ್ತದೆ.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ತಮ್ಮ ವಶದಲ್ಲಿರುವ ಕೈದಿಗಳು, ಮೀನುಗಾರರ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ, ಪಾಕಿಸ್ತಾನ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments