ಸಂತ ನಿರಂಕಾರಿ ಮಿಷನ್ನ ಭಾರತದ ಧಾರ್ಮಿಕ ನಾಯಕ ಬಾಬಾ ಹರದೇವ್ ಸಿಂಗ್ ಶುಕ್ರವಾರ ಕೆನಡಾದ ಮಾಂಟ್ರಿಯಲ್ನಲ್ಲಿ ಕಾರು ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ಮಿಷನ್ ಪತ್ರಿಕಾ ಮತ್ತು ಪ್ರಸಾರ ಉಸ್ತುವಾರಿ ಕೃಪಾಸಾಗರ್, ಬಾಬಾ ಹರದೇವ್ ಸಿಂಗ್ ಸಾವಿನಿಂದ ತಾವು ತುಂಬಾ ಶೋಕತಃಪ್ತರಾಗಿರುವುದಾಗಿ ತಿಳಿಸಿದರು. ಇದೊಂದು ದಿಢೀರ್ ಮತ್ತು ದುಃಖಕರ ಸುದ್ದಿ ಎಂದು ಕೃಪಾಸಾಗರ್ ಹೇಳಿದರು.
ಇದಕ್ಕೆ ಮುಂಚೆ ಬಿಜೆಪಿ ನಾಯಕ ಶಹನಾವಾಜ್ ಹುಸೇನ್ ಟ್ವಿಟರ್ನಲ್ಲಿ ಈ ಬೆಳವಣಿಗೆ ಕುರಿತು ತಿಳಿಸಿ, ಬಾಬಾ ಹರದೇವ್ ಸಿಂಗ್ ಸಾವಿನಿಂದ ರಾಷ್ಟ್ರಕ್ಕೆ ಅಪಾರ ನಷ್ಟವಾಗಿದೆ. ಅವರು ಜನರಿಗೆ ವಿಪುಲ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರತಿಕ್ರಿಯಿಸಿದರು.