Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಕಂಠ ಪೂರ್ತಿ ಕುಡಿದ ನೈಜೀರಿಯನ್ ಮಹಿಳೆಯ ವಿಚಿತ್ರ ವರ್ತನೆ

Webdunia
ಸೋಮವಾರ, 27 ಜೂನ್ 2016 (19:32 IST)
ಕಂಠ ಪೂರ್ತಿ ಕುಡಿದ ನೈಜಿರಿಯನ್ ಮಹಿಳೆಯ ದುವರ್ತನೆ ತೋರಿದ ಘಟನೆ ನ್ಯಾಷನಲ್ ಮಾರುಕಟ್ಟೆ ಮತ್ತು ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
 
ಬೆಂಗಳೂರು: ಪಾನಮತ್ತಳಾಗಿ ನಿಯಂತ್ರಣ ಕಳೆದುಕೊಂಡಿದ್ದ ನೈಜೇರಿಯಾ ಮೂಲದ ಯುವತಿಯೊಬ್ಬಳು ಇಂದು ನಗರದ ಕೆ.ಸಿ.ಆಸ್ಪತ್ರೆ ಮತ್ತು ನ್ಯಾಷನಲ್ ಮಾರುಕಟ್ಟೆ ಬಳಿ ಕೋಲಾಹಲ ಮೆರೆದಿದ್ದಲ್ಲದೇ ಪೊಲೀಸರನ್ನೇ ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.
 
ಮದ್ಯ ಸೇವಿಸಿದ ಮತ್ತಿನಲ್ಲಿ ಮನಬಂದಂತೆ ವರ್ತಿಸುವುದಲ್ಲದೇ ಹಲವರನ್ನು ಥಳಿಸಲು ಪ್ರಯತ್ನಿಸಿದ್ದಾಳೆ. ಹಲವರನ್ನು ಪರಚಿ ಗಾಯಗೊಳಿಸಿದ್ದಾಳೆ. ಪೊಲೀಸರು ಆಕೆಯನ್ನು ಹಿಡಿಯಲು ಬಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. 
 
ಪೊಲೀಸರು ತನ್ನನ್ನು ಹಿಡಿಯಲು ಬರುತ್ತಿರುವುದು ಕಂಡ ಮಹಿಳೆ ಮಾರಿಯಾ, ಅವರನ್ನೇ ಹಿಡಿಯಲು ಪ್ರಯತ್ನಿಸಿದಾಗ ಪೊಲೀಸರೇ ದಿಕ್ಕು ಪಾಲಾಗಿ ಓಡಿಹೋಗಿದ್ದಾರೆ.  
 
ಉಪ್ಪಾರಪೇಟೆ ಪೊಲೀಸರಿಂದ ಮಾರಿಯಾಳನ್ನು ಹಿಡಿಯಲು ಸಾಧ್ಯವಾಗದೆ, ಮಲ್ಲೇಶ್ವರಂ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಕೂಡಾ ಕರೆಸಿಕೊಂಡು  ಮಾರಿಯಾಳನ್ನು ನಿಯಂತ್ರಿಸಲು ಹರಸಾಹಸ ಪಡಲಾಗಿದೆ. 
 
ಕೊನೆಗೆ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಹಿಂದಿನಿಂದ ಮಾರಿಯಾಳ ಮೇಲೆ ಬಟ್ಟೆ ಹಾಕಿ ಬಂಧಿಸಿ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್

Karnataka Weather: ಮಳೆಗಾಗಿ ಕಾಯುತ್ತಿದ್ದರೆ ಇಂದಿನ ಹವಾಮಾನ ತಪ್ಪದೇ ಗಮನಿಸಿ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಮುಂದಿನ ಸುದ್ದಿ
Show comments