Webdunia - Bharat's app for daily news and videos

Install App

ಬಾಲದೇವತೆಗೆ ತಟ್ಟದ ಭೂಕಂಪದ ಬಿಸಿ

Webdunia
ಭಾನುವಾರ, 3 ಮೇ 2015 (10:48 IST)
ಕಳೆದ 9 ದಿನಗಳ ಹಿಂದೆ ನೆರೆ ರಾಷ್ಟ್ರ ನೇಪಾಳದಲ್ಲಿ ನಡೆದ ವಿನಾಶಕಾರಿ ಭೂಕಂಪ ನೇಪಾಳದ ಬಾಲದೇವತೆ ಮತ್ತು ಆಕೆಯ ಅರಮನೆಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನುಂಟು ಮಾಡಿಲ್ಲ.

ನೇಪಾಳದಾದ್ಯಂತ ಆರಾಧಿಸಲ್ಪಡುವ ಕುಮಾರಿ ಎಂಬ ಬಾಲ ದೇವತೆ ವಾಸಿಸುವ ಅರಮನೆಯ ಗೋಡೆಗಳಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿದ್ದು, ಅದನ್ನು ಹೊರತು ಪಡಿಸಿದರೆ ಅರಮನೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಅರಮನೆಯ ಅಕ್ಕಪಕ್ಕದಲ್ಲಿರುವ ಬಹಳಷ್ಟು ಕಟ್ಟಗಳು ಭೂಕಂಪದಿಂದಾಗಿ ಸಂಪೂರ್ಣ ನೆಲಸಮವಾಗಿದ್ದರು ಸಹ ಬಾಲದೇವತೆ ಅರಮನೆ ದೃಢವಾಗಿ ನಿಂತಿರುವುದು ಆಶ್ಚರ್ಯವನ್ನುಂಟು ಮಾಡಿದೆ.ರಾಷ್ಟ್ರದ ರಕ್ಷಕಿ ಎಂದು ಕರೆಯಲ್ಪಡುವ ಜೀವಂತ ಬಾಲದೇವತೆ ಸುರಕ್ಷಿತವಾಗಿರುವುದು ನೇಪಾಳಿಗರಲ್ಲಿ ಸಮಾಧಾನ ತಂದಿದೆ.
 
ನೇಪಾಳದಲ್ಲಿ ಪುಟ್ಟ ಹೆಣ್ಣು ಮಗುವನ್ನು ಬಾಲದೇವತೆಯಾಗಿ ನೇಮಿಸಲಾಗುತ್ತದೆ.  ದೇವತೆಯ ಮಾನ್ಯತೆ ಕೊಟ್ಟು ದುರ್ಗೆಯ ಪ್ರತಿರೂಪವಾಗಿ ಆಕೆಯನ್ನು ಆರಾಧಿಸಲಾಗುತ್ತದೆ.ಆಕೆ ಪ್ರೌಢಾವಸ್ಥೆಗೆ ತಲುಪಿದ ನಂತರ ಬೇರೆ ಮಗುವಿಗೆ ಪಟ್ಟ ಕಟ್ಟಲಾಗುತ್ತದೆ. ಬಾಲದೇವತೆ ರಾಷ್ಟ್ರ ರಾಜಧಾನಿಯಲ್ಲಿರುವ ಅರಮನೆಯಲ್ಲಿ ವಾಸಿಸುತ್ತಾರೆ. ಹಿಂದಿನ ಎಲ್ಲ ರಾಜಕುಮಾರಿಯರ ಕುಟುಂಬವು ಸಹ ಇದೇ ಅರಮನೆಯಲ್ಲಿಯೇ ವಾಸಿಸುತ್ತದೆ. 9 ವರ್ಷದ ಕುಮಾರಿ  ಪ್ರಸ್ತುತ ನೇಪಾಳದ ಬಾಲದೇವತೆಯಾಗಿದ್ದಾಳೆ. "ಆಕೆಯ ಶಕ್ತಿಯೇ ಈ ಸ್ಥಳವನ್ನು ಕಾಪಾಡಿದೆ", ಎನ್ನುತ್ತಾರೆ ನೇಪಾಳದ ನಿವಾಸಿಯೊಬ್ಬರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ