Webdunia - Bharat's app for daily news and videos

Install App

ಉಗ್ರನಿಂದ ಇರಿತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿಯನ್ನ ಉಳಿಸಲು ಅವಿರತ ಪ್ರಯತ್ನ ನಡೆಸಿದ ಸಂಸದ

Webdunia
ಗುರುವಾರ, 23 ಮಾರ್ಚ್ 2017 (09:40 IST)
ಬ್ರಿಟನ್ ಅಧಿವೇಶನ ನಡೆಯುತ್ತಿದ್ದ ವೇಳೆ ಲಂಡನ್ನಿನ ಸಂಸತ್ ಸಮೀಪ ನಿನ್ನೆ ನಡೆದ ಭಯೋತ್ಪಾದಕನ ದಾಳಿಯಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿದೆ. ವೇಗವಾಗಿ ಕಾರು ಓಡಿಸಿಕೊಂಡು ಬಂದ ಆಗಂತುಕ ಸಂಸತ್ ಗೇಟ್ ಬಳಿ ನಿಂತಿದ್ದ ಪೊಲೀಸ್ ಅದಿಕಾರಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೂಡಲೇ ಪೊಲೀಸರು ಗುಂಡಿಕ್ಕಿ ಆಗಂತುಕನನ್ನ ಹೊಡೆದುರುಳಿಸಿದರಾದರೂ ಅಷ್ಟರೊಳಗೆ 5 ಜೀವ ಹಾನಿಯಾಗಿತ್ತು. ಮೃತರಲ್ಲಿ ಇಬ್ಬರು ಪೊಲೀಸರು ಮತ್ತು ಇಬ್ಬರು ಪಾದಾಚಾರಿಗಳು ಸೇರಿದ್ದಾರೆ.

ಸಂಸತ್ತಿನಲ್ಲಿ ಹೊರಗೆ ಬಂದು ಪೊಲೀಸ್ ರಕ್ಷಣೆಗೆ ನಿಂತ ಸಂಸದ: ಉಗ್ರನ ದಾಳಿಯಿಂದ ಬೆಚ್ಚಿಬಿದ್ದ ಸಂಸದರು ಸಂಸತ್ ಭವನದ ಒಳಗೇ ಅವಿತು ಕುಳಿತಿದ್ದರೆ ಒಬ್ಬ ಸಂಸದ ಮಾತ್ರ ಧೈರ್ಯದಿಂದ ಹೊರಬಂದು ರಕ್ತದ ಮಡುವಿನಲ್ಲಿದ್ದ ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಲು ಯತ್ನಿಸಿದ ಘಟನೆ ನಡೆದಿದೆ.

ಸಂಸತ್ ಗೇಟ್ ಬಳಿ ಪೊಲೀಸ್ ಅಧಿಕಾರಿ ಉಗ್ರನಿಂದ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಗಮನಿಸಿದ ಸಂಸದ ಟೊಬಿಯಾಸ್ ಎಲ್ವುಡ್, ಹೊರಗೆ ಓಡಿ ಬಂದಿದ್ದಾರೆ. ಪ್ರಜ್ಞೆ ತಪ್ಪಿದ್ದ ಪೊಲೀಸ್ ಅಧಿಕಾರಿಯ ಬಾಯಿಗೆ ಬಾಯನ್ನಿಟ್ಟು ಊದುವ ಮೂಲಕ ಪ್ರಜ್ಞೆ ಬರಿಸುವ ಪ್ರಯತ್ನ ನಡೆಸಿದ್ದಾರೆ. ಗಾಯದ ಜಾಗದಲ್ಲಿ ಒತ್ತಡ ಹಾಕಿ ರಕ್ತಸ್ರಾವವನ್ನ ತಡೆಯಲು ಯತ್ನಿಸಿದ್ದಾರೆ. ಏರ್ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಬರುವವರೆಗೂ ಸಂಸದ ಇದೇ ಕೆಲಸ ಮಾಡಿದ್ದಾನೆ. ತನ್ನ ಮಿಲಿಟರಿ ಟ್ರೈನಿಂಗ್ ವೇಳೆ ಪಡೆದ ವೈದ್ಯಕೀಯ ಟಿಪ್ಸ್`ಗಳನ್ನ ಇಲ್ಲಿ ಬಳಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಲು ಅವಿರತ ಪ್ರಯತ್ನ ನಡೆಸಿದ ಸಂಸದ ಎಲ್ವುಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಸಂಸದನ ಮೈಕೈ ಮತ್ತು ಮುಖದ ಮೇಲಿದ್ದ ರಕ್ತದ ಗುರುತುಗಳು ಅವರ ಕೆಲಸವನ್ನ ಸಾರಿ ಹೇಳುತ್ತಿದ್ದವು.

ಆದರೆ, ಸಂಸದ ಟೊಬಿಯಾಸ್ ಎಲ್ವುಡ್ ಪ್ರಯತ್ನ ಫಲ ನೀಡಲಿಲ್ಲ. ಉಗ್ರನಿಂದ ಚಾಕು ಇರಿತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿ ಬದುಕಿ ಉಳಿಯಲಿಲ್ಲ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಹೊಸ ತಿರುವು: ತನಿಖೆಯನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

Viral video: ಹೆದ್ದಾರಿಯಲ್ಲಿ ಬೈಕ್ ರೈಡ್ ವೇಳೆ ಜೋಡಿ ಜೀವಗಳ ರೊಮ್ಯಾನ್ಸ್: ಕೊನೆಗೆ ಆಗಿದ್ದೇನು

ಆಪರೇಷನ್ ಸಿಂಧೂರ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ: ಟ್ರಂಪ್‌ಗೆ ಪ್ರಧಾನಿ ಮೋದಿ ಮನವರಿಕೆ

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments