Webdunia - Bharat's app for daily news and videos

Install App

ದಾವೂದ್ ಇಬ್ರಾಹಿಂಗೆ ಹೃದಯಾಘಾತ! ಭೂಗತ ಪಾತಕಿ ಜೀವಕ್ಕೆ ಕುತ್ತು?

Webdunia
ಶನಿವಾರ, 29 ಏಪ್ರಿಲ್ 2017 (07:29 IST)
ಕರಾಚಿ: ಇಷ್ಟು ದಿನಗಳಿಂದ ಭಾರತಕ್ಕೆ ತಲೆನೋವಾಗಿದ್ದ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂಗೆ ತೀವ್ರ ಹೃದಯಾಘಾತವಾಗಿದೆ ಮತ್ತು ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಖಾಸಗಿ ಚಾನೆಲ್ ಒಂದು ವರದಿ ಮಾಡಿದೆ.

 
ಶುಕ್ರವಾರ ತೀವ್ರ ಹೃದಯಾಘಾತಕ್ಕೊಳಗಾದ ದಾವೂದ್ ನನ್ನು ಕರಾಚಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಕೆಲವು ಮೂಲಗಳು ಸುದ್ದಿ ವಾಹಿನಿಗೆ ಹೇಳಿತ್ತು. ಆದರೆ ದಾವೂದ್ ನ ಸಮೀಪವರ್ತಿ ಛೋಟಾ ಶಕೀಲ್ ಇದನ್ನು ತಳ್ಳಿ ಹಾಕಿದ್ದಾನೆ.

ದಾವೂದ್ ಸಂಪೂರ್ಣ ಆರೋಗ್ಯವಾಗಿದ್ದು, ಹೃದಯಾಘಾತವಾಗಿಲ್ಲ ಎಂದು ಶಕೀಲ್ ಸ್ಪಷ್ಟಪಡಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಕಳೆದ ಬಾರಿಗೆ ಏಪ್ರಿಲ್ 19 ರಂದು ಕರಾಚಿಯಲ್ಲಿ ದಾವೂದ್ ತನ್ನ ಅಳಿಯ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ

ಏನೇ ಇದ್ದರೂ, ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು ಪಾಕಿಸ್ತಾನ ದಾವೂದ್ ನ ಆರೋಗ್ಯ ಸ್ಥಿತಿಗತಿಯನ್ನು ಮುಚ್ಚಿಡಬಹುದು. ಯಾಕೆಂದರೆ ಇದುವರೆಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ತನ್ನ ದೇಶದಲ್ಲಿಲ್ಲ ಎಂದೇ ಹೇಳುತ್ತಿದ್ದ ಪಾಕ್ ಗೆ ಈಗ ದಾವೂದ್ ತನ್ನ ದೇಶದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಿಶ್ವಕ್ಕೆ ಸಾರಿದರೆ ಎಲ್ಲರ ಮುಂದೆ ಮಾನ ಹರಾಜಾಗುವುದು ಖಂಡಿತಾ ಎಂದು ಗೊತ್ತಿದೆ. ಅದಕ್ಕಾಗಿ ದಾವೂದ್ ವಿಷಯ ಗುಪ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸೇರಿ 5 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ, ಇಲ್ಲಿದೆ ಡೀಟೆಲ್ಸ್‌

ಮುಂಬೈ: ಆಕಾಸ ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಕಾರ್ಗೋ ಟ್ರಕ್‌

ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ಬಿಜೆಪಿಯವರು ಪುತ್ತೂರು ಬಿಜೆಪಿ ನಾಯಕನ ಪುತ್ರನ ಪ್ರಕರಣದಲ್ಲಿ ಮೌನವೇಕೆ: ಪ್ರಿಯಾಂಕ್ ಖರ್ಗೆ

ತಮಿಳುನಾಡು, 30 ವರ್ಷಗಳಿಂದ ಬೇಕಾಗಿದ್ದ ಮೋಸ್ಟ್ ವಾಟೆಂಡ್‌ ಭಯೋತ್ಪಾದಕರ ಬಂಧನ

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಲಿಂಗರಾಜ್ ಬಂಧನವಾಗುತ್ತಿದ್ದ ಹಾಗೇ ಪಕ್ಷದಿಂದ ಉಚ್ಚಾಟನೆ

ಮುಂದಿನ ಸುದ್ದಿ
Show comments