Webdunia - Bharat's app for daily news and videos

Install App

ಹ್ಹಹ್ಹಹ್ಹ.. ಆಮೆ ಬಳಿ ಲಿಫ್ಟ್ ಕೇಳಿದ ಕಪ್ಪೆ...ಮುಂದೇನಾಯ್ತು?

Webdunia
ಮಂಗಳವಾರ, 5 ಜುಲೈ 2016 (12:05 IST)
ಕೆಲವೊಮ್ಮೆ ಪ್ರಾಣಿ ತರಹ ಆಡಬೇಡ ಎಂದು ಗದರುತ್ತೇವೆ. ಆದರೆ ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ. ಪ್ರಾಣಿ ಪ್ರಪಂಚ ಕುತೂಹಲಗಳ ಆಗರ. ನಮ್ಮ ಹಾಗೆ ಜೀವವಿರುವ ಪ್ರಾಣಿಗಳಲ್ಲಿ ಭಾವನೆ, ಪ್ರೀತಿ, ಶಿಸ್ತು, ಸಂತೋಷ, ದಯೆ, ದುಃಖ, ಸೋಮಾರಿತನ, ಸಹಬಾಳ್ವೆಯ ಇತ್ಯಾದಿ ಗುಣಗಳಿರುತ್ತವೆ. ಇಲ್ಲೊಂದು ಕಪ್ಪೆಯ ಕಥೆಯಿದೆ. ಸೋಮಾರಿ ಕಪ್ಪೆ ಆಮೆ ಜತೆ ಲಿಫ್ಟ್ ಕೇಳಿದ ವಿಚಿತ್ರ ಸತ್ಯಕಥೆ ಇದು.

ಇಂಡೋನೇಷ್ಯಾದ ಜಕಾರ್ತಾ ಬಳಿಯ ಟ್ಯಾಂಗ್​ರಂಗ್ ಎಂಬ ಪುಟ್ಟನಗರದಲ್ಲಿ ಸೆರೆಸಿಕ್ಕ ಫೋಟೋವಿದು. ಹವ್ಯಾಸಿ ಛಾಯಾಗ್ರಾಹಕರಾಗಿರುವ ಸುಹೆರ್​ವುನ್ ಬುಂಟೊರೊ ಎಂಬಾತ ತನ್ನ ಮನೆಯ ಉದ್ಯಾನವನದಲ್ಲಿ ಕಂಡ ಈ ಅಪರೂಪದ ದೃಶ್ಯವನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾನೆ. ಈ ಚಿತ್ರ ನೋಡಿ ಕಪ್ಪೆ- ಆಮೆಯ ಲಿಫ್ಟ್ ಪುರಾಣವನ್ನು ಬಿಚ್ಚಿಡುತ್ತದೆ. 
 
ಆ ಕಪ್ಪೆಗೆ ಎಲ್ಲಿಗೆ ಹೋಗಬೇಕಿತ್ತೋ ಗೊತ್ತಿಲ್ಲ. ಗೊಡ್ಡು ಸೋಮಾರಿ ಇರಬೇಕದು. ಆಮೆ ಬಳಿ ಬಂದು ಲಿಫ್ಟ್ ಕೇಳಿದೆ. ತನ್ನ ಮೇಲೇರ ತೊಡಗಿದ್ದ ಕಪ್ಪೆಯನ್ನು ಆಮೆ ದೂರ ತಳ್ಳಿಲ್ಲ. ಸುಮ್ಮನೆ ಸಹಕಾರ ನೀಡಿದೆ. ಖುಷಿಯಿಂದ ಕಪ್ಪೆ ಆಮೆಯ ಬೆನ್ನೇರಿ ಕುಳಿತು ಸವಾರಿ ಆರಂಭಿಸಿದೆ. ಮುಂದೆ ನಡೆದಿರುವುದು ಮತ್ತೂ ವಿಶೇಷ. ಸ್ವಲ್ಪ ದೂರ ಸಾಗಿದ ಮೇಲೆ ಆಮೆಯ ನಿಧಾನಗತಿಯ ವೇಗ ಕಪ್ಪೆಗೆ ಬೇಸರ ತರಿಸಿದೆ. ಇದ್ಯಾಕೋ ಸರಿ ಬರಲ್ಲ ಎಂದುಕೊಂಡ ಕಪ್ಪೆ ಆಮೆಯ ಬೆನ್ನ ಮೇಲಿಂದ ಇಳಿದು ಆಮೆಯನ್ನು ತಳ್ಳುತ್ತಿರುವ ಫೋಟೋ ಕೂಡಾ ಬುಂಟೊರೊ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಎರಡು ಚಿತ್ರಗಳೀಗ ಆನ್​ಲೈನ್​ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಕುತೂಹಲಕ್ಕೆ ಕಾರಣವಾಗಿವೆ.
 
 
 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments