Webdunia - Bharat's app for daily news and videos

Install App

ತೂಕ ಇಳಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

Webdunia
ಸೋಮವಾರ, 13 ಸೆಪ್ಟಂಬರ್ 2021 (09:10 IST)
ಕ್ರೀಮ್ ಬಣ್ಣದ ಸೂಟ್ ಮತ್ತು ಹೊಳೆಯುವ ಬಿಳಿ ಟೈ ಧರಿಸಿದ್ದ ಕಿಮ್ ಮಧ್ಯರಾತ್ರಿಯಾಗುತ್ತಿದ್ದಂತೆ ಎಲ್ಲರೆದುರು ಕಾಣಿಸಿಕೊಂಡರು. ಪ್ಯೋಂಗ್ಯಾಂಗ್ನ ಪ್ರಕಾಶಮಾನವಾದ ಕಿಮ್ ಇಲ್ ಸುಂಗ್ ಸ್ಕ್ವೇರ್ನಲ್ಲಿ ಪ್ರದರ್ಶಕರು ಮತ್ತು ಪ್ರೇಕ್ಷಕರ ಚಪ್ಪಾಳೆಗಳಿಗೆ ಪ್ರತಿಕ್ರಿಯೆಯಾಗಿ ಸರ್ವಾಧಿಕಾರಿ ಪ್ರಕಾಶಮಾನ ಕಿರುನಗೆ ಬೀರುತ್ತಿದ್ದರು. ಮುಗುಳ್ನಕ್ಕು, ಜನಸಮೂಹದತ್ತ ಕೈಬೀಸಿದರು ಮತ್ತು ಮೆರವಣಿಗೆಯನ್ನು ವೀಕ್ಷಿಸಲು ಬಾಲ್ಕನಿಯಲ್ಲಿ ಇದ್ದ ಕಿಮ್ ಪರೇಡ್ ಆರಂಭಕ್ಕೂ ಮುನ್ನ ತನಗೆ ಹೂವುಗಳನ್ನು ನೀಡಿದ ಮಕ್ಕಳಿಗೆ ಮುತ್ತಿಟ್ಟರು.

ಅವರು ಉತ್ಸಾಹದಿಂದ ನಕ್ಕರು ಮತ್ತು ಕಾರ್ಯಕ್ರಮದ ಉದ್ದಕ್ಕೂ ಮೆರವಣಿಗೆ ಮಾಡಿದವರನ್ನು ಶ್ಲಾಘಿಸಿದರು, ಹಾಗೂ ಹಿರಿಯ ಅಧಿಕಾರಿಗಳೊಂದಿಗೂ ಉತ್ಸಾಹ ಭರಿತವಾಗಿ ಚಾಟ್ ಮಾಡುತ್ತಿದ್ದರು.
ಇದು ದೇಶದ ಸಾರ್ವಜನಿಕ ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ನಾಯಕನೊಬ್ಬನ ವರ್ತನೆಗೆ ಸರಿಹೊಂದುವಂತೆ ಕಾಣಿಸಬಹುದು. ಆದರೆ, 2018ರಲ್ಲಿ ಅವರು ಆ ರೀತಿಯಲ್ಲಿ ಇರಲಿಲ್ಲ. ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಯ ಅವಧಿಯಲ್ಲಿ ಉತ್ತರ ಕೊರಿಯಾದ ಮೌಂಟ್ ಪೇಕುಟು ಹತ್ತುವಾಗ ಕಿಮ್ ತನ್ನ ಉಸಿರು ಹಿಡಿಯಲು ಕಷ್ಟಪಡುತ್ತಿದ್ದರು. ಈ ಸಣ್ಣ ವಿಡಿಯೋ ಕ್ಲಿಪ್ ಟಿವಿಗಳಲ್ಲೂ ಪ್ರಸಾರವಾಗಿತ್ತು.
ಇನ್ನು, ಜೂನ್ನಲ್ಲಿ ಕಿಮ್ನ ತೂಕ ನಷ್ಟವು ಮೊದಲು ಗಮನಕ್ಕೆ ಬಂದಿತ್ತು. ಆಗ ಅವರು, ಆಡಳಿತ ಪಕ್ಷದ ಸಭೆಯನ್ನು ಕರೆಯಲು ವಾರಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಕೆಲವು ಉತ್ತರ ಕೊರಿಯಾದ ವೀಕ್ಷಕರು ಸುಮಾರು 170 ಸೆಂಟಿಮೀಟರ್ (5 ಅಡಿ, 8 ಇಂಚು) ಎತ್ತರ ಮತ್ತು ಹಿಂದೆ 140 ಕಿಲೋಗ್ರಾಂ (308 ಪೌಂಡ್) ತೂಕ ಹೊಂದಿದ್ದ ಕಿಮ್ 10-20 ಕಿಲೋಗ್ರಾಂ (22-44 ಪೌಂಡ್) ಕಳೆದುಕೊಂಡಿರಬಹುದು ಎಂದು ಹೇಳಿದರು. ಕಿಮ್ರ ತೂಕ ನಷ್ಟವು ಅವರ ಸಾಮಾನ್ಯ ಸಾರ್ವಜನಿಕ ಚಟುವಟಿಕೆಯನ್ನು ಪರಿಗಣಿಸಿ ಆರೋಗ್ಯ ಸಮಸ್ಯೆಗಳ ಸೂಚಕಕ್ಕಿಂತ ಅವರ ಆಕಾರ ಸುಧಾರಿಸುವ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ತಜ್ಞರು ಸುದ್ದಿ ಮಾಧ್ಯಮ ಎಪಿಗೆ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

Covid 19: ಈ ದೇಶದಲ್ಲಿ ಹೆಚ್ಚುತ್ತಿದೆ ಕೋವಿಡ್‌ ಪ್ರಕರಣ, ಭಾರತದ ಮೇಲೂ ಬೀಳುತ್ತಾ ಪರಿಣಾಮ

Belgavi, ಕುರಾನ್ ಗ್ರಂಥ ಸುಟ್ಟ ಪ್ರಕರಣ: ಅಂಗಡಿ ಮುಂಗಟ್ಟು ಬಂದ್‌ ಮಾಡಿ ಬೀದಿಗಿಳಿದ ಮುಸ್ಲಿಮರು

ಮೊಸರಲ್ಲಿ ಕಲ್ಲು ಹುಡುಕುವ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

ಮುಂದಿನ ಸುದ್ದಿ
Show comments