Webdunia - Bharat's app for daily news and videos

Install App

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೀದಾ ಜಿಯಾ ಪುತ್ರನಿಗೆ ಏಳು ವರ್ಷ ಶಿಕ್ಷೆ

Webdunia
ಗುರುವಾರ, 21 ಜುಲೈ 2016 (13:34 IST)
ಹಣ ದುರುಪಯೋಗ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ  ಬಾಂಗ್ಲಾದೇಶದ ಮಾಜಿ ಪ್ರಧಾನಿ, ವಿಪಕ್ಷ ನಾಯಕಿ ಖಾಲಿದಾ ಜಿಯಾ ಅವರ ಹಿರಿಯ ಪುತ್ರನಿಗೆ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ಸ್ಥಳೀಯ ಕೋರ್ಟ್, ಜಿಯಾ ಅವರ ಹಿರಿಯ ಪುತ್ರ 51 ವರ್ಷ ವಯಸ್ಸಿನ ತಾರೀಕ್ ರೆಹಮಾನ್ ಅವರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದ್ದರೂ ಬಾಂಗ್ಲಾದೇಶದ ಹೈಕೋರ್ಟ್ ಆರೋಪವನ್ನು ಎತ್ತಿಹಿಡಿದು ಏಳು ವರ್ಷಗಳ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ. 
 
ಲಂಡನ್‌ನಲ್ಲಿ ವಾಸವಾಗಿರುವ ರೆಹಮಾನ್, ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರ ಹಿರಿಯ ಪುತ್ರರಾಗಿದ್ದು, ಮುಂದಿನ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದೆ. 
 
ಆರೋಪಿ ತಾರೀಕ್ ರೆಹಮಾನ್ ತಮ್ಮ ರಾಜಕೀಯ ಪ್ರಭಾವ ಬಳಸಿ ತಮ್ಮ ಗೆಳೆಯ ಗಿಸೂದ್ದಿನ್ ಮಾಮುನ್ ಅವರಿಗೆ 2.5 ಮಿಲಿಯನ್ ಡಾಲರ್ ಹಣವನ್ನು ವಿದ್ಯುತ್ ಘಟಕ ಸ್ಥಾಪನೆಗಾಗಿ ನೀಡಲಾಗಿತ್ತು. ನಂತರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಯಿತು ಎಂದು ಡೆಪ್ಯೂಟಿ ಅಟಾರ್ನಿ ಜನರಲ್ ಮೊನಿರುಜುಮಾನ್ ಕಬೀರ್ ತಿಳಿಸಿದ್ದಾರೆ.
 
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ ಪುತ್ರ ತಾರೀಕ್ ರೆಹಮಾನ್ 45 ಮಿಲಿಯನ್ ಟಾಕಾ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
 
ಆರೋಪಿ ರೆಹಮಾನ್‌ಗೆ ಏಳು ವರ್ಷಜೈಲು ಮತ್ತು 200 ಮಿಲಿಯನ್ ಟಾಕಾ ದಂಡ ಪಾವತಿಸುವಂತೆ ಕೋರ್ಟ್ ತೀರ್ಪಿನಲ್ಲಿ ಆದೇಶಿಸಿದೆ. ಒಂದು ವೇಳೆ, ಸುಪ್ರೀಂಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸದಿದ್ದರೆ ರೆಹಮಾನ್ ರಾಜಕೀಯ ಜೀವನ ಅಂತ್ಯವಾದಂತಾಗುತ್ತದೆ ಎಂದು ಅಟಾರ್ನಿ ಜನರಲ್ ಕಬೀರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿಬೆಟ್ಟದಿಂದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಶಿಫ್ಟ್: ಮಾವು ಬೆಳೆಗಾರರ ಕೋಪಕ್ಕೆ ಹೆದರಿದ ಸರ್ಕಾರ

ಕರ್ನಾಟಕದಲ್ಲಿ ಕೆಲಸದ ಅವಧಿ 10 ಗಂಟೆಗೆ ಹೆಚ್ಚಿಸಬೇಕೇ, ನಿಮ್ಮ ಅಭಿಪ್ರಾಯವೇನು

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಚಿವ ಅರೆಸ್ಟ್: ಕಾರಣವೇನು ಗೊತ್ತಾ

ವಿಮಾನ ದುರಂತ: ಸಹೋದರನ ಶವಕ್ಕೆ ಹೆಗಲುಕೊಟ್ಟು ಬಿಕ್ಕಿಬಿಕ್ಕಿ ಅತ್ತ ವಿಶ್ವಾಸ್ ರಮೇಶ್ ವಿಡಿಯೊ ಇಲ್ಲಿದೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

ಮುಂದಿನ ಸುದ್ದಿ
Show comments